ಚೆನ್ನೈ: ದೇಶೀಯ ಉದ್ಯಮಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಿದ್ದು, ಇದರ ಉಪಯೋಗ ಪಡೆದುಕೊಂಡು ಭಾರತವನ್ನು ದೇಶೀಯ ಹಡಗು ಕೇಂದ್ರವಾಗಿ ಮಾರ್ಪಡಿಸಲು ವಿಫುಲ ಅವಕಾಶಗಳಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಅವರು ಭಾರತೀಯ ಕರಾವಳಿ ಕಾರ್ಯಪಡೆಯ ‘ವಿಗ್ರಹ’ ಹಡಗಿನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ರೂಪಿಸಿದ ನೀತಿ, ನಿರೂಪಣೆಯ ಲಾಭವನ್ನು ಪಡೆದುಕೊಂಡು, ದೇಶವನ್ನು ಹಡಗು ನಿರ್ಮಾಣದ ಕೇಂದ್ರವಾಗಿಸುವತ್ತ ನಾವು ಹೆಜ್ಜೆ ಹಾಕಬೇಕು. ಏಕೆಂದರೆ ಮುಂದಿನ ಎರಡು ವರ್ಷಗಳಲ್ಲಿ ವಿಶ್ವಕ್ಕೆ ಸಂಬಂಧಿಸಿದಂತೆ ಭದ್ರತೆಗಾಗಿ ಖರ್ಚು ಮಾಡುವ ಹಣ 2.1 ಟ್ರಿಲಿಯನ್ಗೆ ತಲುಪಲಿದೆ. ಈ ಮೊತ್ತ ಹೆಚ್ಚಿನ ರಾಷ್ಟ್ರಗಳ ಬಜೆಟ್ಗಿಂತಲೂ ಹೆಚ್ಚು. ಈ ಸಂದರ್ಭದಲ್ಲಿ ನಾವು ನಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಅವಕಾಶ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿನ ಸಾಧ್ಯತೆಗಳ ಆಧಾರದಲ್ಲಿಯೇ ಕೇಂದ್ರ ಸರ್ಕಾರ ದೇಶೀಯ ಉದ್ಯಮ ಅಭಿವೃದ್ಧಿಗೆ ಪೂರಕ ನೀತಿಗಳನ್ನು ರೂಪಿಸಿದೆ. ಇದರ ಅನುಕೂಲ ಪಡೆಯುವಂತೆಯೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.