ಢಾಕ: ಬಾಂಗ್ಲಾದೇಶದ ಕುಮಿಲ್ಲಾ ದೌಢ್ಕಂಡಿಯಲ್ಲಿ ಸುಮಾರು 1000 ವರ್ಷಗಳಷ್ಟು ಹಳೆಯ, ಸುಮಾರು 12 ಕೆ.ಜಿ. ತೂಕದ ವಿಷ್ಣುವಿನ ಮೂರ್ತಿಯೊಂದು ಪತ್ತೆಯಾಗಿದೆ.
ಕೃಷ್ಣ ಶಿಲೆಯ ಈ ವಿಗ್ರಹವನ್ನು ಕೊಳವೊಂದನ್ನು ಪುನಶ್ಚೇತನಗೊಳಿಸುವ ಸಂದರ್ಭದಲ್ಲಿ ಉತ್ಖನನ ಮಾಡಲಾಗಿತ್ತು. ಈ ವಿಗ್ರಹ ಚಾರ್ಗೋಳಿ ಖಂಡಕೆರ್ ನಜೀರ್ ಉದ್ದೀನ್ ಮಲ್ಟಿಪರ್ಪಸ್ ಶಾಲೆಯ ಮುಖ್ಯಶಿಕ್ಷಕ ಯೂಸುಫ್ ಎಂಬವರಿಗೆ ದೊರೆತಿತ್ತು. ಸುಮಾರು 22 ದಿನಗಳ ಬಳಿಕ ಈ ಪುರಾತನ ಮೌಲ್ಯಯುತ ವಿಗ್ರಹದ ಬಗ್ಗೆ ದೌಢ್ಕಂಡಿಯ ಪೊಲೀಸರು ಮಾಹಿತಿ ಪಡೆದಿದ್ದು, ಇದನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಅಲ್ಲಿನ ಪುರಾತತ್ವ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಅತೌರ್ ರೆಹಮಾನ್ ಮಾತನಾಡಿದ್ದು, ಈ ಪ್ರತಿಮೆ ಸುಮಾರು 1000 ವರ್ಷಕ್ಕೂ ಹಳೆಯದಾಗಿದ್ದು, ಬಹಳ ಮೌಲ್ಯಯುತವಾಗಿರುವುದಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಸಂರಕ್ಷಣೆ ಮಾಡುವ ಅಗತ್ಯ ಇದ್ದು, ಈ ಹಿನ್ನೆಲೆಯಲ್ಲಿ ತಕ್ಷಣವೇ ಇದನ್ನು ಮೈನಾವತಿ ಮ್ಯೂಸಿಯಂಗೆ ಹಸ್ತಾಂತರ ಮಾಡುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಈ ವಿಗ್ರಹ 23 ಇಂಚುಗಳಷ್ಟು ಎತ್ತರವಿದ್ದು, 9.5 ಇಂಚುಗಳಷ್ಟು ಅಗಲವಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.