ಬೆಂಗಳೂರು: ನಗರದಲ್ಲಿನ ಬೈಯಪ್ಪನ ಹಳ್ಳಿಯಲ್ಲಿ ಸಿದ್ಧವಾದ ದೇಶದ ಮೊದಲ ಎಸಿ ರೈಲು ನಿಲ್ದಾಣ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದ್ದು, ಇದಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನಿರಿಸಲಾಗಿದೆ.
ಅತ್ಯಾಧುನಿಕ ವ್ಯವಸ್ಥೆ, ಸುಸಜ್ಜತವಾಗಿ ನಿರ್ಮಾಣವಾಗಿರುವ ಈ ರೈಲು ನಿಲ್ದಾಣದ ವಿಡಿಯೋ ಒಂದನ್ನು ಕೇಂದ್ರ ಸಚಿವ ಪೀಯೂಷ್ ಗೋಯಲ್ ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ.
Namma Bengaluru: The Silicon Valley of India will be home to Sir M Visvesvaraya Terminal, India's first centralised AC Railway Station.
🧑🤝🧑 Enhanced Passenger Amenities
🌇 Beautiful Landscape & Infrastructure
🚖 Adequate Parking Spacespic.twitter.com/HUNLtC4eKX— Piyush Goyal (@PiyushGoyal) March 20, 2021
ಈ ರೈಲು ನಿಲ್ದಾಣ ಯೋಜನೆಯು ಸುಮಾರು 314 ಕೋಟಿ ರೂ. ವೆಚ್ಚದಲ್ಲಿ , 3,400 ಚದರ ಅಡಿಗೆ ಸಂಬಂಧಿಸಿದಂತೆ ನಿರ್ಮಾಣವಾಗಿದ್ದು, ಇದು 2 ಸುರಂಗ ಮಾರ್ಗಗಳನ್ನು ಸಹ ಹೊಂದಿದೆ. ಇವುಗಳು ಏಳು ರೈಲ್ವೆ ಫ್ಲ್ಯಾಟ್ಫಾರ್ಮ್ಗಳಿಗೆ ಸಂಪರ್ಕ ಕಲ್ಪಿಸುತ್ತಿವೆ. ಇಲ್ಲಿ ಪ್ರತಿನಿತ್ಯ 40 ಕ್ಕೂ ಅಧಿಕ ರೈಲುಗಳನ್ನು ಆಪರೇಟ್ ಮಾಡಬಹುದಾಗಿದೆ.
ಇನ್ನು ಈ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಲಿಫ್ಟ್ಗಳು, ಎಸ್ಕಲೇಟರ್ ವ್ಯವಸ್ಥೆಗಳೂ ಇವೆ. ವಿ ಐ ಪಿ ಗಳಿಗಾಗಿ ವಿಶೇಷ ಕೊಠಡಿಗಳನ್ನೂ ಕಾಯ್ದಿರಿಸಲಾಗಿದೆ. ಫುಡ್ ಕೋರ್ಟ್, ಕಾರು, ದ್ವಿಚಕ್ರ ವಅಹನಗಳ ಪಾರ್ಕಿಂಗ್ ವ್ಯವಸ್ಥೆ, ಅಟೋ ರಿಕ್ಷಾಗಳು, ಬಿಎಂಟಿಸಿಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಈ ನೂತನ ನಿಲ್ದಾಣ ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.