ನವದೆಹಲಿ: 2023 ರ ವೇಳೆಗೆ ದೇಶದ ಸಂಪೂರ್ಣ ರೈಲು ಜಾಲವನ್ನು ಸಂಪೂರ್ಣವಾಗಿ ವಿದ್ಯುದ್ದೀಕರಿಸಲಾಗುವುದು ಮತ್ತು ಎಲ್ಲಾ ರೈಲು ಜಾಲಗಳು 2030 ರ ವೇಳೆಗೆ ನವೀಕರಿಸಬಹುದಾದ ಶಕ್ತಿಯ ಮೇಲೆ ಚಲಿಸುತ್ತವೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಮ್ಯಾರಿಟೈಮ್ ಇಂಡಿಯಾ ಸಮಿಟ್ -2021 ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ವೆಚ್ಚವನ್ನು ತಗ್ಗಿಸಲು ಮತ್ತು ಪೂರೈಕೆ ಸರಪಳಿ ದಕ್ಷತೆಯನ್ನು ಹೆಚ್ಚಿಸಲು ಸರ್ಕಾರವು ಬಹು-ಮಾದರಿ ವ್ಯವಸ್ಥಾಪನಾ ಪರಿಹಾರಗಳನ್ನು ರೂಪಿಸುತ್ತಿದೆ ಎಂದು ಹೇಳಿದರು.
ರಸ್ತೆ, ರೈಲು ಮತ್ತು ಜಲಮಾರ್ಗಗಳ ಏಕೀಕರಣವು ಭಾರತವನ್ನು ನಿಜವಾಗಿಯೂ ‘ಒಂದು ರಾಷ್ಟ್ರ, ಒಂದು ಮಾರುಕಟ್ಟೆ, ಒಂದು ಪೂರೈಕೆ’ಯನ್ನಾಗಿ ಮಾಡಬಹುದು ಎಂದು ಸಚಿವರು ಹೇಳಿದರು.
ಮೂಲಸೌಕರ್ಯ ಕ್ಷೇತ್ರಕ್ಕೆ ಸರ್ಕಾರದ ಮೂರು ಮಂತ್ರಗಳು ನವೀಕರಣ, ರಚನೆ ಮತ್ತು ಸಮರ್ಪಣೆ ಎಂದ ಗೋಯಲ್, ಆರು ವರ್ಷಗಳಲ್ಲಿ ಭಾರತದ ಪ್ರಮುಖ ಬಂದರುಗಳ ಸಾಮರ್ಥ್ಯವು ದ್ವಿಗುಣಗೊಂಡಿದೆ . ಕರಾವಳಿ ಆರ್ಥಿಕ ವಲಯಗಳೊಂದಿಗೆ ಸ್ಮಾರ್ಟ್ ಸಿಟಿಗಳು ಮತ್ತು ಕೈಗಾರಿಕಾ ಉದ್ಯಾನವನಗಳು ಮತ್ತು ಸಂಯೋಜಿತ ಬಂದರುಗಳನ್ನು ಸರ್ಕಾರ ಅಭಿವೃದ್ಧಿಪಡಿಸಿದೆ” ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಮ್ಯಾರಿಟೈಮ್ ಇಂಡಿಯಾ -2030 ದೃಷ್ಟಿಕೋನವು ಸರ್ಕಾರದ ಆದ್ಯತೆಗಳನ್ನು ಎತ್ತಿ ತೋರಿಸುತ್ತದೆ. ವಿವಿಧ ಬಂದರು ಯೋಜನೆಗಳಲ್ಲಿ ಮೂರು ಲಕ್ಷ ಕೋಟಿ ರೂಪಾಯಿಗಳ ಉದ್ದೇಶಿತ ಹೂಡಿಕೆ ಈ ವಲಯದಲ್ಲಿ 20 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುತ್ತದೆ. ಕಡಲ ವಲಯವು ಆತ್ಮನಿರ್ಭರ ಭಾರತಕ್ಕೆ ಅತ್ಯಂತ ನಿರ್ಣಾಯಕ ಕ್ಷೇತ್ರವಾಗಿದೆ ಮತ್ತು ದೇಶದ ಕರಾವಳಿ ಪ್ರದೇಶವನ್ನು ಜೀವನ ಸುಲಭ ಮತ್ತು ಸುಲಲಿತ ವ್ಯಾಪಾರಕ್ಕೆ ಆದರ್ಶಪ್ರಾಯವಾಗಿಸಲು ಕೇಂದ್ರವು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.