ಬೆಂಗಳೂರು: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ತನ್ನೆಲ್ಲಾ ಪ್ರಕಟಣೆಗಳನ್ನು 2021 ರ ಜನವರಿಯಲ್ಲಿ 50% ರಿಯಾಯಿತಿ ದರದಲ್ಲಿ ನೀಡಲು ಮುಂದಾಗಿದೆ.
ಕೊರೋನಾ ಕಾರಣದಿಂದ ಅಕಾಡೆಮಿಯ ಕಚೇರಿಗೆ ತೆರಳಿ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗದೇ ಇದ್ದವರು ತಮಗೆ ಬೇಕಾದ ಪುಸ್ತಕವನ್ನು ಆಯ್ಕೆ ಮಾಡಿ ಅಕಾಡೆಮಿಗೆ ದೂರವಾಣಿಯ ಮೂಲಕ ಅಥವಾ ಇ ಮೇಲ್ ಮೂಲಕ ತಿಳಿಸಬಹುದಾಗಿದೆ. ಪುಸ್ತಕದ ಬೆಲೆಯ ಜೊತೆಗೆ ಅದನ್ನು ಕೊರಿಯರ್ ಮಾಡುವುದಕ್ಕೆ ತಗುಲುವ ವೆಚ್ಚದ ಮಾಹಿತಿಯನ್ನು ನೀಡಲಾಗುತ್ತಿದ್ದು, ಆ ಮೊತ್ತವನ್ನು ಅಕಾಡೆಮಿಯ ಖಾತೆಗೆ ಜಮೆ ಮಾಡಿದಲ್ಲಿ ಕೊರಿಯರ್ ಮುಖೇನ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಪುಸ್ತಕಗಳ ಬಗ್ಗೆ www.karnatakasahithyaacademy.org ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಪುಸ್ತಕಗಳನ್ನು ಖರೀದಿ ಮಾಡಲು sahithya.academy@gmail.com ಇ ಮೇಲ್ ಐಡಿ ಅಥವಾ ದೂರವಾಣಿ ಸಂಖ್ಯೆ 080-22211730 / 22106460, ಮೊಬೈಲ್ ಸಂಖ್ಯೆ 9449935103 ಸಂಪರ್ಕಿಸುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.