ಬೆಂಗಳೂರು: ಬಿಳಿಗಿರಿ ರಂಗಸ್ವಾಮಿ ದೇವಾಲಯದ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಹಕ್ಕಿ ಹಬ್ಬಕ್ಕೆ ಇಂದು ಚಾಲನೆ ದೊರೆತಿದೆ.
ಈ ಹಬ್ಬವನ್ನು ಕೇವಲ ಪಕ್ಷಿಗಳ ಪ್ರದರ್ಶನದ ದೃಷ್ಟಿಕೋನದಿಂದ ಮಾತ್ರವೇ ನಡೆಸಲಾಗುತ್ತಿಲ್ಲ. ಬದಲಾಗಿ, ಈ ಪ್ರದೇಶಕ್ಕೆ ಹೆಚ್ಚುವರಿಯಾಗಿ ಬಂದು ಸೇರಿರುವ ಹಕ್ಕಿಗಳ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿಯೂ ಈ ಹಬ್ಬ ಮಹತ್ವ ಪಡೆದಿದೆ. ಇದು ಸ್ಥಳೀಯವಾಗಿರುವ ಹಕ್ಕಿಗಳನ್ನು ಗುರುತಿಸುವುದಕ್ಕೂ ಸಹಾಯ ಮಾಡಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಇದು 7 ನೇ ಪಕ್ಷಿ ಉತ್ಸವವಾಗಿದ್ದು, ಇದರಲ್ಲಿ ಹೊಸದಾಗಿ ಕಂಡು ಬರುವ ಹಕ್ಕಿಗಳ ಪ್ರಭೇದಗಳನ್ನು ಸೇರಿಸುವುದಕ್ಕೆ ಈ ಹಬ್ಬ ಸಹಕಾರಿಯಾಗಲಿದೆ.
ಬಿಆರ್ಟಿ ರಾಜ್ಯದ ನಿರ್ಣಾಯಕ ಮತ್ತು ಸೂಕ್ಷ್ಮ ಪ್ರದೇಶವಾಗಿದ್ದು, ಇದನ್ನು ಬರ್ಡಿಂಗ್ ಗೂ ಪೂರಕವಾಗುವ ಪ್ರದೇಶವನ್ನಾಗಿ ಮಾಡಲು ಈ ಹಕ್ಕಿ ಹಬ್ಬವನ್ನು ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಗಿಡಗಳಿದ್ದು ಸಸ್ಯಾಹಾರಿ ಮತ್ತು ಮಾಂಸಾಹಾರಿ ಹಕ್ಕಿಗಳ ಪ್ರಭೇದಗಳಿಗೆ ಇದು ಸಂತಾನೋತ್ಪತ್ತಿಗೂ ಇದು ಪೂರಕವಾಗಿದೆ. ಪಕ್ಷಿಗಳ ಸಂತತಿಯ ಸಂರಕ್ಷಣೆ, ಅಧ್ಯಯನ ಹಾಗೂ ಪಕ್ಷಿವೀಕ್ಷಣೆಯ ದೃಷ್ಟಿಯಿಂದ ಈ ಹಕ್ಕಿ ಹಬ್ಬ ಹೆಚ್ಚು ಮಹತ್ವ ಪಡೆದಿದೆ.
ಈ ಬಾರಿ ಏಳನೇ ಹಕ್ಕಿ ಹಬ್ಬ ನಡೆಯಲಿದ್ದು, ಈ ಹಿಂದೆ ಮಂಗಳೂರು, ರಂಗನತಿಟ್ಟು, ದಾಂಡೇಲಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಕಾರವಾರಗಳಲ್ಲಿಯೂ ಹಕ್ಕಿ ಹಬ್ಬ ನಡೆದಿದ್ದು, ಚಾಮರಾಜನಗರದಲ್ಲಿ ಇದೇ ಮೊದಲ ಬಾರಿಗೆ ಹಕ್ಕಿ ಹಬ್ಬ ನಡೆಯುತ್ತಿದೆ. ಈ ಹಬ್ಬವನ್ನು ಅರಣ್ಯ ಇಲಾಖೆ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಈ ಕಾರ್ಯಕ್ರಮದಲ್ಲಿ ಹಕ್ಕಿಗಳ ಬಗ್ಗೆ ಸಂವಾದ, ಉಪನ್ಯಾಸ, ಹಕ್ಕಿಗಳ ವೀಕ್ಷಣೆಗೆ ಅವಕಾಶವನ್ನು ನೀಡಲಾಗಿದೆ. ಕಾರ್ಯಕ್ರಮದಲ್ಲಿ ಸಂಶೋಧಕರು, ಛಾಯಾಗ್ರಾಹಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ಆಯೋಜಕರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.