ಬೆಂಗಳೂರು: ನಗರದ ಕಲಾಸೀಪಾಳ್ಯ ಬಳಿಯ ಜಲಕಂಠೇಶ್ವರ ದೇವಾಲಯದಲ್ಲಿ ಸುಮಾರು 800 ವರ್ಷಗಳಷ್ಟು ಪುರಾತನ ವಿಗ್ರಹಗಳು ಪತ್ತೆಯಾಗಿವೆ.
ದೇಗುಲದ ಹಿಂಭಾಗದಲ್ಲಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಪಾಯ ತೆಗೆಯುವಾಗ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಜಲಕಂಠೇಶ್ವರ ದೇಗುಲ 1500 ವರ್ಷಗಳಷ್ಟು ಪುರಾತನ ದೇಗುಲವಾಗಿದ್ದು, ಇದರ ಸಮೀಪದಲ್ಲಿಯೇ ಈ ಪಾಯ ಅಗೆಯುವ ಸಂಧರ್ಭದಲ್ಲಿ 800 ವರ್ಷ ಪುರಾತನ ವಿಗ್ರಹಗಳು ಸಿಕ್ಕಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವಿಗ್ರಹಗಳ ಬಗ್ಗೆ ಪುರಾತತ್ವ ಇಲಾಖೆಯವರು ಮಾಹಿತಿ ಪಡೆದುಕೊಂಡಿದ್ದು ಇವುಗಳನ್ನು ಉತ್ಖನನ ಮಾಡಬೇಕೇ ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಸಮಯದ ಹಿಂದೆ ಬಿಬಿಎಂಪಿ ಅಧಿಕಾರಿಗಳು ಕಾಮಗಾರಿ ನಡೆಸುವ ಸಂದರ್ಭದಲ್ಲಿ ಮದ್ದುಗುಂಡುಗಳು ದೊರಕಿದ್ದವು ಎಂಬ ಮಾಹಿತಿ ಇದೆ. ಇದೀಗ ದೇಗುಲದ ಬಳಿಯಲ್ಲಿ ಕಾಮಗಾರಿಯ ಸಂದರ್ಭದಲ್ಲಿ ವಿಗ್ರಹಗಳು ಪತ್ತೆಯಾಗಿವೆ. ಈ ಭಾಗದಲ್ಲಿ ಮತ್ತಷ್ಟು ಉತ್ಖನನ ನಡೆದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಳೆಯ ಕಾಲದ ಪಳೆಯುಳಿಕೆಗಳು ದೊರೆಯುವುದು ಸಾಧ್ಯವಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅರ್ಧ ಕೆತ್ತನೆ ಮಾಡಲಾಗಿರುವ ಶಿವ ಪಾರ್ವತಿ ವಿಗ್ರಹ ಪತ್ತೆಯಾಗಿದೆ. ಇಲ್ಲೇ ಸಮೀಪದಲ್ಲಿ ಜಲಕಂಠೇಶ್ವರ ದೇಗುಲಕ್ಕೆ ಸೇರಿದ ಕಲ್ಯಾಣಿಯೂ ಹಿಂದೆ ಇತ್ತು ಎಂಬುದಾಗಿ ಮಾಹಿತಿಗಳಿದ್ದು, ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಆ ಕಲ್ಯಾಣಿಯ ಕುರುಹುಗಳು ಪತ್ತೆಯಾಗುವ ಸಾಧ್ಯತೆಯೂ ಇದೆ ಎಂಬುದು ಬಲ್ಲವರ ಮಾತು.
ಟಿಪ್ಪುವಿನ ಕಾಲದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದ ಈ ದೇವಾಲಯದಲ್ಲಿ ಟಿಪ್ಪು ಸಹ ಪೂಜೆ ಸಲ್ಲಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ವಾಣಿವಿಲಾಸ ಸರ್ಕಾರಿ ಕಾಲೇಜಿನ ತರಗತಿ ಕೋಣೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಪುರಾತನ ವಿಗ್ರಹಗಳು ಪತ್ತೆಯಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.