ಬೆಂಗಳೂರು: ಭಾರತ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ ದೇಶದ ಸಾಮಾನ್ಯ ನಾಗರಿಕರ ವಾಯು ಯಾನ ಉಡಾನ್ ಅಡಿಯಲ್ಲಿ ಬೆಳಗಾವಿಯಿಂದ ಗುಜರಾತಿನ ಸೂರತ್ ಹಾಗೂ ಅಜ್ಮೇರ್ನ ಕಿಶನ್ ಗಢ ನಡುವಿನ ಮೊದಲ ವಿಮಾನ ಸಂಚಾರಕ್ಕೆ ಇಂದು ಹಸಿರು ನಿಶಾನೆ ತೋರಿಸಲಾಯಿತು.
ಈ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ (ಎಂ.ಓ.ಸಿ.ಎ.)ದ ಅಧಿಕಾರಿಗಳು ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎ.ಎ.ಐ.)ದ ಅಧಿಕಾರಿಗಳು ಉಪಸ್ಥಿತರಿದ್ದರು. ದೇಶದ 300ಕ್ಕೂ ಹೆಚ್ಚು ಮಾರ್ಗಗಳಲ್ಲಿ ಉಡಾನ್ ಯೋಜನೆ ಅಡಿಯಲ್ಲಿ ವಿಮಾನಗಳ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈ ಯೋಜನೆಯ ವ್ಯಾಪ್ತಿಯಲ್ಲಿ ಇದು 303ನೇ ಮಾರ್ಗದ ಉದ್ಘಾಟನೆಯಾಗಿದೆ.
ವಾಯು ಸಂಪರ್ಕವಿಲ್ಲದ ವಲಯಗಳನ್ನು ಸಂಪರ್ಕಿಸುವ ನಿರಂತರ ಪ್ರಯತ್ನದಲ್ಲಿ, ಕಳೆದ ವರ್ಷ ಉಡಾನ್ -3 ಹರಾಜಿನಲ್ಲಿ ಸ್ಟಾರ್ ಏರ್ ಗೆ ಬೆಳಗಾವಿ ಸೂರತ್ – ಕಿಶನ್ ಗಢ ಮಾರ್ಗದ ಯೋಜನೆಯನ್ನು ಒಪ್ಪಿಸಲಾಗಿತ್ತು. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವಿಮಾನ ಸೇವೆಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭ ಮಾಡಲಾಗಿದೆ. ಈ ಯೋಜನೆಯನ್ನು ಉಡಾನ್ನ ವಿಜಿಎಫ್ ನಿಧಿಯನ್ನು ಬಳಕೆ ಮಾಡಿ ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.