ಕೋಲಾರ: ಡಿಸೆಂಬರ್ 12 ರಂದು ಕೋಲಾರದ ವಿಸ್ಟ್ರಾನ್ನ ಐಫೋನ್ ಉತ್ಪಾದನಾ ಕೇಂದ್ರದಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಕೋಲಾರ ಪೊಲೀಸರು ಗುರುವಾರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಅಂಗ ಸಂಘಟನೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ತಾಲ್ಲೂಕು ಅಧ್ಯಕ್ಷನನ್ನು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕೋಲಾರ ಗ್ರಾಮೀಣ ಪೊಲೀಸರು ಶ್ರೀಕಾಂತ್ ಎಂಬಾತನನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿ ಬಳಿಕ ಈತನನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಯಿತು. ಸಂಸ್ಥೆಯು ಬಾಕಿ ವೇತನ ಮತ್ತು ಓವರ್ಟೈಮ್ ಕೆಲಸಕ್ಕೆ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿ ನೌಕರರು ಕೆಲವು ವಾರಗಳ ಹಿಂದೆ ಶ್ರೀಕಾಂತ್ನನ್ನು ಸಂಪರ್ಕಿಸಿ ಪ್ರತಿಭಟನೆ ನಡೆಸಲು ಸಹಾಯ ಕೋರಿದ್ದರು ಎಂದು ಕೋಲಾರ್ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 12 ರಂದು ವಿಸ್ಟ್ರಾನ್ ಮತ್ತು ಎಸ್ಎಫ್ಐ ನೌಕರರು ಬೆಳಿಗ್ಗೆ 11 ಗಂಟೆಗೆ ಕೋಲಾರ ಕಲೆಕ್ಟರ್ ಸತ್ಯಭಾಮ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಯೋಜಿಸಿದ್ದರು. ಶ್ರೀಕಾಂತ್ ವಾಟ್ಸಾಪ್ ಸಂದೇಶವನ್ನು ಸೃಷ್ಟಿಸಿ ಪ್ರತಿಭಟನೆಗೆ ಕರೆ ನೀಡಿದ್ದ, ಈ ಸಂದೇಶ ನೌಕರರ ನಡುವೆ ವ್ಯಾಪಕವಾಗಿ ಹರಡಿತ್ತು.
ಡಿಸೆಂಬರ್ 12 ರ ಬೆಳಿಗ್ಗೆ ಶ್ರೀಕಾಂತ್ ಮತ್ತು ಹಲವಾರು ಎಸ್ಎಫ್ಐ ಕಾರ್ಯಕರ್ತರು ವಿಸ್ಟ್ರಾನ್ನ ಆವರಣಕ್ಕೆ ಪ್ರವೇಶಿಸಿದ್ದಾರೆ ಮತ್ತು ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
“ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಮತ್ತು ಕಂಪನಿಯ ಒಳಗೆ ಹೊರಗಿನ ಜನರನ್ನು ನುಸುಳಿಸಿ ವಿಧ್ವಂಸಕ ಕೃತ್ಯ ನಡೆಸಿದ್ದಕ್ಕಾಗಿ ಶ್ರೀಕಾಂತ್ನನ್ನು ಬಂಧಿಸಲಾಯಿತು” ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.