ಬೆಂಗಳೂರು: ಭಾರತದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಕರ್ನಾಟಕ ರಾಜ್ಯದಲ್ಲಿ ತೃತೀಯ ಲಿಂಗಿ ಮಕ್ಕಳಿಗಾಗಿ ವಸತಿ ನಿಲಯಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ.
ಮಕ್ಕಳ ರಕ್ಷಣಾ ಸೇವೆಗಳ ಅಡಿಯಲ್ಲಿ ಸಪ್ಲಿಮೆಂಟರಿ ಪ್ರಾಜೆಕ್ಟ್ ಅಪ್ರೂವಲ್ ಬೋರ್ಡ್ ಈ ಸರ್ಕಾರಿ ತೃತೀಯ ಲಿಂಗಿ ಮಕ್ಕಳ ವಸತಿ ನಿಲಯಗಳನ್ನು ಆರಂಭಿಸಲಿದೆ. ಈ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಅನುಮೋದನೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ. ತೃತೀಯ ಲಿಂಗಿ ಮಕ್ಕಳ ರಕ್ಷಣೆ, ಆರೈಕೆಗೆ ಸಂಬಂಧಿಸಿದಂತೆ ಈ ವಸತಿ ನಿಲಯಗಳನ್ನು ಆರಂಭಿಸಲು ಮುಂದಾಗಿರುವುದಾಗಿ ತಿಳಿಸಿದೆ.
ಕಳಂಕ ಮತ್ತು ಪೂರ್ವಾಗ್ರಹಗಳ ವಿರುದ್ಧ ತೃತೀಯ ಲಿಂಗಿಗಳು ಹೋರಾಟ ನಡೆಸುತ್ತಿದ್ದಾರೆ. ತೃತೀಯ ಲಿಂಗಿ ಮಕ್ಕಳ ಆರಾಮದಾಯಕ ಜೀವನ ಮತ್ತು ಅವರು ಸಾಮಾಜಿಕವಾಗಿ ದುರುಪಯೋಗಕ್ಕೆ ಒಳಗಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಮನೆಗಳು ಹೆಚ್ಚು ಸಹಕಾರಿಯಾಗಲಿದೆ. ಹಾಗೆಯೇ ಅವರಿಗೆ ಮತ್ತಷ್ಟು ಧೈರ್ಯಯುತ ಜೀವನವನ್ನು ಕಲ್ಪಿಸುವಲ್ಲಿಯೂ ಸಹ ಈ ಮನೆಗಳು ಪೂರಕವಾಗಲಿದೆ.
ಒಟ್ಟಾರೆಯಾಗಿ ತೃತೀಯ ಲಿಂಗಿ ಮಕ್ಕಳ ಅಭ್ಯುದಯದ ದೃಷ್ಟಿಕೋನವನ್ನಿಟ್ಟುಕೊಂಡು ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ ಆಫೀಸರ್ ಪಲ್ಲವಿ ಆಕುರತಿ, ಡೈರೆಕ್ಟರ್, ಡೈರೆಕ್ಟರೇಟ್ ಆಫ್ ಚೈಲ್ಡ್ ಪ್ರೊಟೆಕ್ಷನ್ ಅವರು ಈ ನೂತನ ಚಿಂತನೆಯೊಂದಕ್ಕೆ ರೂಪು ನೀಡಿದ್ದಾರೆ. ತೃತೀಯ ಲಿಂಗಿ ಮಕ್ಕಳಿಗೆ ಹಿಂಸಾಚಾರ, ಬೆದರಿಕೆಗಳಿಂದ ಮುಕ್ತವಾದ ಸ್ವತಂತ್ರ ಬಾಲ್ಯವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ಯೋಜನೆ ಪೂರಕವಾಗಲಿದೆ. ವರದಿಯೊಂದರ ಪ್ರಕಾರ ರಾಜ್ಯದಲ್ಲಿ 2 ತೃತೀಯ ಲಿಂಗಿ ಮಕ್ಕಳ ವಸತಿ ಗೃಹಗಳನ್ನು ಆರಂಭಿಸಲಾಗುತ್ತಿದ್ದು, ಸುಮಾರು 50 ಮಕ್ಕಳಿಗೆ ನೆಲೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.