ಹಾಸನ: ಹಾಸನ ಜಿಲ್ಲೆಯ ಪೆನ್ಶನ್ ಮೊಹಲ್ಲಾದಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿದೆ ಎಂದು ವರದಿ ಮಾಡಿದ್ದಕ್ಕಾಗಿ ಉದ್ರಿಕ್ತ ಜನರು ಗುಂಪು ಮಹಿಳಾ ಪತ್ರಕರ್ತೆಯನ್ನು ನಿಂದಿಸಿ, ಹಲ್ಲೆ ಮಾಡಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಪುನರಾವರ್ತಿತ ಅಪರಾಧಿಗಳು ಎಂದು ಕುಖ್ಯಾತಿ ಪಡೆದಿರುವ ಹಸನ್ ಬಾಬು ಮತ್ತು ರೆಹಮಾನ್ ಈ ಪ್ರದೇಶದಲ್ಲಿ ನಾಲ್ಕು ಅಕ್ರಮ ಕಸಾಯಿಖಾನೆಗಳನ್ನು ನಡೆಸುತ್ತಿದ್ದಾರೆ ಮತ್ತು ಸುಮಾರು 100 ದನಗಳನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂಬ ಆರೋಪವಿದೆ.
ಮಹಿಳಾ ಪತ್ರಕರ್ತೆಯು ಪೊಲೀಸ್ ಅಧಿಕಾರಿಗಳು ಮತ್ತು ಕೆಲವು ಪ್ರಾಣಿ ಪ್ರಿಯರೊಂದಿಗೆ ಅಕ್ರಮ ಕಸಾಯಿಖಾನೆ ಮತ್ತು ಐದು ಜಾನುವಾರು ಕಟ್ಟಿ ಹಾಕಿದ ತಾಣಗಳಿಗೆ ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಆಕೆ ಕಸಾಯಿಖಾನೆ ಬಾಗಿಲು ತೆರೆಯಲು ಮತ್ತು ತನ್ನ ತಂಡದೊಂದಿಗೆ ಪ್ರಾಣಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಉದ್ರಿಕ್ತ ಜನರು ಮಹಿಳೆಯನ್ನು ಸುತ್ತುವರಿದ್ದಾರೆ ಎನ್ನಲಾಗಿದೆ.
ಸ್ಥಳದಿಂದ ಹೋಗದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನು ಆಕೆಗೆ ಹಾಕಲಾಗಿದೆ. ಬಾಬು ಮತ್ತು ರೆಹಮಾನ್ ಅಕ್ರಮವಾಗಿ ತಾವು ಕಟ್ಟಿ ಹಾಕಿದ ದನಗಳನ್ನು ಮರೆಮಾಚುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮಹಿಳಾ ಪತ್ರಕರ್ತೆಯ ತಂಡವು ಕೆಲವೇ ಹಸುಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ.
ಅರಸಿಕೇರೆ ಟೌನ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.