ನವದೆಹಲಿ: ನೆಟ್ವರ್ಕ್ ಸಮಸ್ಯೆಯಿಂದಾಗಿ ಆನ್ಲೈನ್ ತರಗತಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಮಹಾರಾಷ್ಟ್ರದ ವಿದ್ಯಾರ್ಥಿನಿಯೊಬ್ಬಳ ನೆರವಿಗೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಾಲಯ ಧಾವಿಸಿದೆ. ಈ ಮೂಲಕ ಆಕೆಯ ಸಮಸ್ಯೆಯನ್ನು ದೂರ ಮಾಡಿದೆ.
ಸ್ವಪ್ನಾಲಿ ಸುತರ್ ಎನ್ನುವ ಮಹಾರಾಷ್ಟ್ರದ ದರಿಸ್ಟೆ ಗ್ರಾಮದ ಬಾಲಕಿ ನೆಟ್ವರ್ಕ್ ಸಮಸ್ಯೆಯ ಕಾರಣದಿಂದಾಗಿ ಕಾಡಿನ ಮಧ್ಯೆ ಟೆಂಟ್ ಹಾಕಿ ಆನ್ಲೈನ್ ತರಗತಿಗಳಿಗೆ ಹಾಜರಾಗುವ ಸಾಹಸ ಮಾಡುತ್ತಿದ್ದಳು. ಲಾಕ್ಡೌನ್ನಿಂದಾಗಿ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದ ಕಾರಣ ತನ್ನ ಹಳ್ಳಿಯಲ್ಲಿ ಸಿಲುಕಿಕೊಂಡಿದ್ದ ಸ್ವಪ್ನಾಲಿಗೆ ಮುಂಬೈ ಪಶುವೈದ್ಯಕೀಯ ಕಾಲೇಜು ನಡೆಸಿದ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ಈ ಅಡಚಣೆಯನ್ನು ನಿವಾರಿಸಲು, ಅವಳ ಸಹೋದರರು ಎರಡು ಕಿಲೋಮೀಟರ್ ದೂರದಲ್ಲಿರುವ ಬೆಟ್ಟದ ಮೇಲೆ ಶೆಡ್ ನಿರ್ಮಿಸಿದ್ದರು. ಇಲ್ಲಿ ಮೊಬೈಲ್ ಸಿಗ್ನಲ್ ಆಕೆಗೆ ಸಿಗುತ್ತಿತ್ತು.
ಆಕೆ ಸಮಸ್ಯೆಯ ಬಗ್ಗೆ ದೂರದರ್ಶನ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಹೀಗಾಗಿ ಪ್ರಧಾನಿ ಕಚೇರಿ ಮಧ್ಯಪ್ರವೇಶಿಸಿ ಆಕೆಯ ಸಮಸ್ಯೆಯನ್ನು ಬಗೆಹರಿಸಿದೆ.
ಸಮಸ್ಯೆ ತಿಳಿದ ಒಂದು ವಾರದೊಳಗೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಧಿಕಾರಿಗಳು, ಭಾರತ್ ನೆಟ್ ಅಧಿಕಾರಿಗಳು ದರಿಸ್ಟೆ ಗ್ರಾಮವನ್ನು ತಲುಪಿ, ಇಂಟರ್ನೆಟ್ ಕೇಬಲ್ಗಳನ್ನು ನೇರವಾಗಿ ಸ್ವಪ್ನಾಲಿಯ ಮನೆಗೆ ಹಾಕಿದ್ದಾರೆ. ಈಗ ಆಕೆ ಮನೆಯಿಂದಲೇ ಸುರಕ್ಷಿತವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದಾಳೆ.
ಸಹಾಯ ಮಾಡಿದ ಮಾಧ್ಯಮ ಮತ್ತು ಸರ್ಕಾರಕ್ಕೆ ಸ್ವಪ್ನಾಲಿ ಧನ್ಯವಾಗಳನ್ನು ಅರ್ಪಣೆ ಮಾಡಿದ್ದಾಳೆ.
Thank You @narendramodi ji for a such sensible intervention.
Thank you @rsprasad ji for speedily action to ensure net connectivity to Swapnali to realise her dream.
PMO ensures young girl doesnt miss online lecture due to net connectivity issues anymore https://t.co/Lq19itrpMw pic.twitter.com/Mf66iXxIk8
— Vijaya Rahatkar (@VijayaRahatkar) August 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.