ನವದೆಹಲಿ: ಭಯೋತ್ಪಾದನೆಯ ವಿಚಾರದಲ್ಲಿ ಪಾಕಿಸ್ಥಾನವನ್ನು ಉಗ್ರಗಾಮಿಗಳ ತವರು, ಭಯೋತ್ಪಾದಕರ ಸುರಕ್ಷಿತ ತಾಣ, ಉಗ್ರರ ಸ್ವರ್ಗ ಎಂದೆಲ್ಲಾ ಏಕೆ ಗುರುತಿಸಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಪಾಕ್ ಅವಲೋಕನ ನಡೆಸಬೇಕಿದೆ ಎಂದು ಭಾರತ ತಿಳಿಸಿದೆ.
ಭಯೋತ್ಪಾದನೆ ನಿಗ್ರಹ ಸಪ್ತಾಹದ ಅಂಗವಾಗಿ ‘ಭಯೋತ್ಪಾದನೆಯ ಜಾಗತಿಕ ಉಪಟಳ’ ಎಂಬ ವೆಬಿನಾರ್ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿ ಮಾತನಾಡಿದ ಮಹಾವೀರ ಸಿಂಘ್ವಿ ಅವರು ಪಾಕಿಸ್ಥಾನದ ವಿರುದ್ಧ ಈ ಮಾತುಗಳನ್ನು ಹೇಳಿದ್ದಾರೆ.
ಜಗತ್ತು ಕೊರೋನಾ ಸಂಕಷ್ಟದಿಂದ ನಲುಗಿ ಹೋಗಿದೆ. ಹೀಗಿದ್ದರೂ ಪಾಕಿಸ್ಥಾನ ಮಾತ್ರ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುವುದು, ಕಾರಣವಿಲ್ಲದೆಯೇ ಭಾರತದ ವಿರುದ್ಧ ಕಾಲ್ಕೆರೆದುಕೊಂಡು ಗಲಭೆ ಮಾಡುವುದು, ಭಾರತದ ಮೇಲೆ ಆಧಾರಗಳಿಲ್ಲದೇ ಹೋದರೂ ಆರೋಪಗಳನ್ನು ಹೊರಿಸುವ ಕೆಲಸದಲ್ಲಿಯೇ ಮಗ್ನವಾಗಿದೆ. ಜೊತೆಗೆ ಭಾರತದ ಆಂತರಿಕ ವಿಚಾರಗಳಲ್ಲಿಯೂ ಮೂಗು ತೂರಿಸುವ ಮೂಲಕ ನರಿ ಬುದ್ಧಿ ಪ್ರದರ್ಶನ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ತನ್ನ ನೆಲದಲ್ಲಿನ ಉಗ್ರಗಾಮಿಗಳನ್ನು ಪೋಷಿಸುವ ಕೆಲಸವನ್ನೂ ಪಾಕ್ ಮಾಡುತ್ತಿದೆ. ಭಾರತದ ವಿರುದ್ಧ ಉಗ್ರಗಾಮಿಗಳು ದಾಳಿ ನಡೆಸಿದಾಗ ಆ ದಾಳಿಯನ್ನು ಸ್ವಾತಂತ್ರ್ಯ ಹೋರಾಟ ಎಂಬಂತೆ ಪಾಕಿಸ್ಥಾನ ಬಿಂಬಿಸುವ ಕೆಲಸ ಮಾಡುತ್ತಿದೆ. ಅಂತರರಾಷ್ಟ್ರೀಯ ಸಮುದಾಯಗಳು ಪಾಕಿಸ್ಥಾನದ ಇಂತಹ ಉಗ್ರ ಪ್ರೇರಕ ಕೃತ್ಯಗಳನ್ನು ನಡೆಸದಂತೆ ಮತ್ತು ಪಾಕಿಸ್ಥಾನದಲ್ಲಿರುವ ಉಗ್ರರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಡ ಹೇರಬೇಕಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಪಾಕಿಸ್ಥಾನ ಉಗ್ರರಿಗೆ ಬೆಂಬಲ ನೀಡುತ್ತಿದೆ ಎಂಬುದಕ್ಕೆ ಅಲ್ಲಿನ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಲಾಡೆನ್ ನನ್ನು ಹುತಾತ್ಮ ಎಂದು ಕರೆದಿರುವುದೇ ದೊಡ್ಡ ಸಾಕ್ಷ್ಯ. ಜೊತೆಗೆ ಸುಮಾರು 40 ಸಾವಿರದಷ್ಟು ಉಗ್ರರು ದೇಶದಲ್ಲಿರುವ ಬಗ್ಗೆಯೂ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಪಾಕಿಸ್ಥಾನ ಉಗ್ರರ ತವರೂರು, ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕೊಡುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆಯ ಅಗತ್ಯವಿಲ್ಲ ಎಂದೂ ಅವರು ಹೇಳಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.