ನವದೆಹಲಿ: ಚೀನಾ ಮತ್ತು ನೇಪಾಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಉತ್ತರಾಖಂಡದ ಪಿಥೋರಘರ್ ಜಿಲ್ಲೆಯ ಗ್ರಾಮಗಳು ಅತ್ಯಂತ ಕಳಪೆ ಗುಣಮಟ್ಟದ ದೂರವಾಣಿ ಸಂಪರ್ಕವನ್ನು ಹೊಂದಿವೆ. ಇಲ್ಲಿನ ಗ್ರಾಮಸ್ಥರು ಪ್ರಸ್ತುತ ಸಂವಹನ ಅಗತ್ಯಗಳಿಗಾಗಿ ನೇಪಾಳದ ಸಿಮ್ ಕಾರ್ಡ್ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಆ ಗ್ರಾಮಗಳಿಗೆ ಉಪಗ್ರಹ ಫೋನ್ಗಳನ್ನು ಒದಗಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ವರದಿಗಳು ತಿಳಿಸಿವೆ.
ಉಪಗ್ರಹ ಫೋನ್ಗಳನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ಜಿಲ್ಲಾಡಳಿತಕ್ಕೆ ಒದಗಿಸಿದ್ದು, ಒಟ್ಟು 49 ಗ್ರಾಮ ಪ್ರಧಾನ್ಗಳಿಗೆ ಅದನ್ನು ಒದಗಿಸಲು ನಿರ್ಧರಿಸಲಾಗಿದೆ. ಈ ಕ್ರಮವು ಈ ಪ್ರದೇಶಕ್ಕೆ ಪ್ರಮುಖ ಸಂಪರ್ಕ ಉತ್ತೇಜನವಾಗಿ ಹೊರಹೊಮ್ಮಲಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಈ ಪ್ರದೇಶಗಳ ಮೇಲೆ ನೇಪಾಳ ಮತ್ತು ಚೀನಾಗಳು ಹಕ್ಕು ಸಾಧಿಸಲು ಪ್ರಯತ್ನಿಸುತ್ತಿರುವ ನಿದರ್ಶನಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದು ಮಹತ್ವದ ಕ್ರಮವೂ ಆಗಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಹ ಕಠಿಣ ಭೂಪ್ರದೇಶದಿಂದಾಗಿ ಈ ಪ್ರದೇಶದಲ್ಲಿ ಯಾವುದೇ ಪ್ರಮುಖ ಟವರ್ ಮೂಲಸೌಕರ್ಯಗಳನ್ನು ಅಳವಡಿಸಿಲ್ಲ, ಈ ಪ್ರದೇಶಗಳು ಬಹಳ ಕಡಿಮೆ ದೂರವಾಣಿ ಸಂಪರ್ಕವನ್ನು ಹೊಂದಿವೆ.
ಅಲ್ಲದೇ, ಇರುವ ದೂರವಾಣಿ ಸೌಲಭ್ಯಗಳನ್ನು ಬಳಸಲು ಗ್ರಾಮಸ್ಥರು ಒಳಬರುವ ಮತ್ತು ಹೊರಹೋಗುವ ಕರೆಗಳಿಗೆ ಶುಲ್ಕ ವಿಧಿಸಬೇಕಾಗಿದೆ. ಎಸ್ಎಂಎಸ್ಗಳಿಗೂ ದೊಡ್ಡ ಪ್ರಮಾಣದಲ್ಲಿ ಶುಲ್ಕವನ್ನು ವಿಧಿಸಲಾಗಿದೆ. ಇದು ಗ್ರಾಮಸ್ಥರಿಗೆ ದೊಡ್ಡ ಆರ್ಥಿಕ ಹೊರೆಯನ್ನು ವಿಧಿಸಿದೆ. ಹೀಗಾಗಿ ಗ್ರಾಮ ಪ್ರಧಾನ್ ಹಯತ್ ಸಿಂಗ್ ಅವರು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಭೇಟಿಯಾಗಿ ದೂರವಾಣಿ ಕರೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಇದೀಗ ಆ ಗ್ರಾಮಗಳ ದೂರವಾಣಿ ಸಮಸ್ಯೆಯನ್ನು ದೂರ ಮಾಡುವ ಸಲುವಾಗಿ ಉಪಗ್ರಹ ಫೋನುಗಳನ್ನು ಅಲ್ಲಿ ಪರಿಚಯಿಸಲಾಗುತ್ತಿದೆ. ಇದು ಗ್ರಾಮಸ್ಥರಿಗೆ ದೊಡ್ಡ ಮಟ್ಟದ ನಿರಾಳತೆಯನ್ನು ಒದಗಿಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.