ನವದೆಹಲಿ: ಉತ್ತರ ಪ್ರದೇಶದ ಅಂಚೆ ಇಲಾಖೆ ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಜನರನ್ನು ತಲುಪುವ ಮೂಲಕ ದಾಖಲೆ ನಿರ್ಮಿಸಿದೆ. ಸೋಮವಾರ, ಅಂಚೆ ಇಲಾಖೆಯ ಯುಪಿ ವಲಯವು ಆಧಾರ್ ಶಕ್ತಗೊಂಡ ಪಾವತಿ ವ್ಯವಸ್ಥೆ (ಎಇಪಿಎಸ್) ಮೂಲಕ ರಾಜ್ಯದ 2.74 ಜನರಿಗೆ 30 ಕೋಟಿ ರೂಪಾಯಿಗಳ ಹಂಚಿಕೆ ಮಾಡಿದೆ.
ಒಂದು ದಿನದಲ್ಲಿ ಅತಿ ಹೆಚ್ಚು ವ್ಯಕ್ತಿಗಳೊಂದಿಗೆ ನಡೆಸಲಾದ ನಗದು ವ್ಯವಹಾರ ಇದಾಗಿದೆ. ವರದಿಗಳ ಪ್ರಕಾರ, ಅಗತ್ಯವಿರುವವರಿಗೆ ಅವರ ಮನೆ ಬಾಗಿಲಿಗೆ ಹಣವನ್ನು ಒದಗಿಸುವ ಮೆಗಾ ಅಭಿಯಾನವನ್ನು ಅಂಚೆ ಇಲಾಖೆಯ ಯುಪಿ ವಲಯವು ಸೋಮವಾರ ಪ್ರಾರಂಭಿಸಿದೆ. ರಾಜ್ಯದಲ್ಲಿ ಒಟ್ಟು 2.74 ಲಕ್ಷ ಜನರು ಇದರ ಲಾಭ ಪಡೆದಿದ್ದಾರೆ, ಇದು ದೇಶದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಜನರಿಗೆ ನಗದು ಹಂಚಿಕೆಯಾಗಿದೆ.
ಯುಪಿ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೌಶ್ಲೇಂದ್ರ ಕುಮಾರ್ ಸಿನ್ಹಾ ಅವರು ಈ ಬಗ್ಗೆ ಮಾತನಾಡಿ, ಉತ್ತರ ಪ್ರದೇಶದ 2.740 ಲಕ್ಷಕ್ಕೂ ಹೆಚ್ಚು ಖಾತೆದಾರರಿಗೆ 278 ಕೋಟಿ ರೂಪಾಯಿಗಳನ್ನು ಅವರ ಮನೆ ಬಾಗಿಲಿಗೆ ಹೋಗಿ ನೀಡಲಾಗಿದೆ ಎಂದಿದ್ದಾರೆ.
ಕೊರೋನಾ ಯೋಧರಂತೆ ಕೆಲಸ ಮಾಡುವ ಅಂಚೆ ನೌಕರರು ಅಗತ್ಯವಿರುವ ವ್ಯಕ್ತಿಗಳ ಮನೆ ಬಾಗಿಲಿಗೆ ತಲುಪುತ್ತಿದ್ದಾರೆ ಮತ್ತು ಯಾರಾದರೂ ತಮ್ಮ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಯಿಂದ ಗರಿಷ್ಠ 10 ಸಾವಿರ ರೂಪಾಯಿಗಳನ್ನು ಪೋಸ್ಟ್ಮ್ಯಾನ್ಬಳಿ ಲಭ್ಯವಿರುವ ಮೈಕ್ರೋ ಎಟಿಎಂಗಳಿಂದ ಹಿಂಪಡೆಯಬಹುದು ಎಂದು ಲಕ್ನೋ ವೃತ್ತದ ಅಂಚೆಸೇವೆ ನಿರ್ದೇಶಕ ಕೃಷ್ಣಕುಮಾರ್ ಯಾದವ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.