ನವದೆಹಲಿ: ಕೊರೋನಾ ಸೋಂಕಿಗೆ ಮೃತಪಟ್ಟವರಲ್ಲಿ ಹೆಚ್ಚಿನ ಸಂಖ್ಯೆ ವೃದ್ಧರದ್ದೇ ಇದೆ. ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ವ್ಯಕ್ತಿಗಳನ್ನೇ ಹೆಚ್ಚಾಗಿ ಬಲಿ ತೆಗೆದುಕೊಳ್ಳುವ ಈ ಸೋಂಕಿನಿಂದ ಹಿರಿಯ ನಾಗರಿಕರನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿಸಿ ಕೇಂದ್ರ ಆರೋಗ್ಯ ಸಚಿವಾಲಯ ಉಪಯುಕ್ತ ಮಾಹಿತಿಗಳನ್ನು ಜನರಿಗೆ ನೀಡಿದೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ವೃದ್ಧರಲ್ಲಿ ಈ ಸೋಂಕು ಕಾಣಿಸಿಕೊಳ್ಳದಂತೆ ತಡೆಯುವುದು ಸಾಧ್ಯವಾಗಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ನಿಯಂತ್ರಿಸಬಹುದಾಗಿದೆ.
ಮಿನಿಸ್ಟ್ರಿ ಆಫ್ ಸೋಷಿಯಲ್ ಜಸ್ಟೀಸ್ ಆಂಡ್ ಎಂಪವರ್ಮೆಂಟ್ ಮತ್ತು ಮಿನಿಸ್ಟ್ರಿ ಆಫ್ ಹೆಲ್ತ್ ಆಂಡ್ ಫ್ಯಾಮಿಲಿ ವೆಲ್ಫೇರ್ಗಳು ಜಂಟಿಯಾಗಿ ಕೊರೋನಾದಿಂದ ದೈಹಿಕ ಮತ್ತು ಮಾನಸಿಕವಾಗಿ ಹಿರಿ ಜೀವಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತ ಪಟ್ಟಿ ಸಿದ್ಧ ಮಾಡಿದ್ದು, ಆ ಮೂರು ಪುಟಗಳ ಪಟ್ಟಿಯನ್ನು ಮಿನಿಸ್ಟ್ರಿ ಆಫ್ ಸೋಷಿಯಲ್ ಜಸ್ಟೀಸ್ ಆಂಡ್ ಎಂಪವರ್ಮೆಂಟ್ನ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.
ಹಾಗಾದರೆ ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆಗಳೇನು? ಎಂಬ ಕುತೂಹಲವೇ. ಅದಕ್ಕುತ್ತರ ಇಲ್ಲಿದೆ ನೋಡಿ…
🔹ಹಿರಿಯ ನಾಗರಿಕರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಾದ ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳಿರುವುದು ಸಹಜ. ಇಃತಹ ಸಮಸ್ಯೆ ಎದುರಿಸುತ್ತಿರುವವರನ್ನು ಸೋಂಕಿತರ ಸಂಪರ್ಕ ದಿಂದ ದೂರವಿರಿಸಬೇಕು.
🔹ವೃದ್ಧರನ್ನು ಹೆಚ್ಚಾಗಿ ಮನೆಯೊಳಗೆಯೇ ಇರುವಂತೆ ನೋಡಿಕೊಳ್ಳುವುದು. ಜೊತೆಗೆ ಅವರನ್ನು ಈ ಕಠಿಣ ಪರಿಸ್ಥಿತಿಯಲ್ಲಿ ಯಾರನ್ನೂ ಭೇಟಿ ಮಾಡದಂತೆ ನೋಡಿಕೊಳ್ಳುವುದು. ತೀರಾ ಅಗತ್ಯದ ಭೇಟಿಗಳಾದರೆ ಅಃತರ ಕಾಪಾಡಿಕೊಳ್ಳುವುದು.
🔹ಜೊತೆಗೆ ದೇಹ ಮತ್ತು ಮನಸ್ಸಿಗೆ ರಿಲ್ಯಾಕ್ಸ್ ಮಾಡುವ ಯೋಗ, ವ್ಯಾಯಾಮ ಮೊದಲಾದವುಗಳನ್ನು ಮಾಡುವಂತೆ ಪ್ರೇರೇಪಿಸುವುದು.
🔹ಆದಷ್ಟು ಹಿರೀಯರ ಜೊತೆಗೆ ಸಮಯ ಕಳೆಯುವುದು. ಸುಳ್ಳು ಮಾಹಿತಿಗಳಿಂದ ಹಿರಿಯರನ್ನು ದೂರವಿರುವಂತೆ ಮಾಡಿ ,ಕೊರೋನಾ ವಿರುದ್ದ ಅವರ ಮನೋಸ್ಥೈರ್ಯ ವನ್ನು ಬಲಗೊಳಿಸುವುದು.
🔹ಮನೆಯಲ್ಲಿಯೇ ತಯಾರಿಸಿದ ಆಹಾರ ನೀಡುವುದು. ತಾಜಾ ಹಣ್ಣಿನ ರಸಗಳನ್ನು ನೀಡುವ ಮೂಲಕ ಅವರ ಇಮ್ಯುನಿಟಿ ಪವರ್ ಹೆಚ್ಚಿಸುವುದು.
🔹ಕೈ ಕುಲುಕುವುದು, ತಬ್ಬಿಕೊಳ್ಳುವಂತಹ ಪ್ರಕ್ರಿಯೆಗಳಿಂದ ವೃದ್ಧರನ್ನು ಆಪತ್ತಿಗೆ ತಳ್ಳದಿರಿ. ಜೊತೆಗೆ ಮನೆಯಿಂದ ಹೊರಗೆ ಹೋಗುವುದಕ್ಕೂ ಅವಕಾಶ ನೀಡಬೇಡಿ. ಹಾಗೆಯೇ ವೈದ್ಯರ ಸೂಚನೆ ಇಲ್ಲದ ಯಾವುದೇ ಔಷಧ ಗಳನ್ನು ಸೇವಿಸಲು ಬಿಡದಿರಿ.
ದೇಶದಲ್ಲಿ ಅದೆಷ್ಟೋ ಕೋಟಿ ಹಿರಿಯ ನಾಗರಿಕರಿದ್ದಾರೆ. ಅವರನ್ನು ಸೋಂಕಿಗೆ ಗುರಿಯಾಗದಂತೆ ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿ ಮಾಡುವ ಜವಾಬ್ದಾರಿ ದೇಶದ ಪ್ರತಿಯೊಬ್ಬರ ಮೇಲಿದೆ. ಆದ್ದರಿಂದ ಕೇಂದ್ರದ ಈ ಸಲಹೆಗಳನ್ನು ಪಾಲಿಸಿ ನಮ್ಮ ಮನೆಯ ಹಿರಿಯರನ್ನು ನಾವು ಕಾಪಾಡಿಕೊಳ್ಳೋಣ. ಆ ಮೂಲಕ ದೇಶದ ಹಿತಕ್ಕಾಗಿ ಕೆಲಸ ನಿರ್ವಹಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.