ಗುವಾಹಟಿ: ಈಶಾನ್ಯ ಭಾರತ ದೇಶದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸೇವಾಭಾರತಿ ಪೂರ್ವಾಂಚಲ್ ಕೈ ಜೋಡಿಸಿದೆ. ಪರಿಹಾರ ಕಾರ್ಯದಲ್ಲಿ ಅದು ನಿರತವಾಗಿದೆ.
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಅಲ್ಲಿನ ರಾಜ್ಯ ಸರಕಾರ ಲಾಕ್ಡೌನ್ ಅನ್ನು ಅನುಷ್ಠಾನಗೊಳಿಸಿದೆ. ಹೀಗಾಗಿ ಜನಸಾಮಾನ್ಯರು ನಿತ್ಯದ ಆಹಾರಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ. ಅದರಲ್ಲೂ ಮುಖ್ಯವಾಗಿ ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ತುಂಬ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಅವರಿಗೆ ಅವರ ದೈನಂದಿನ ಅಗತ್ಯಗಳನ್ನು ಪೂರೈಸಲು ನೆರವಿನ ಅನಿವಾರ್ಯತೆ ಇದೆ. ಹೀಗಾಗಿ ಸೇವಾಭಾರತಿ ಪೂರ್ವಾಂಚಲ್ ಪರಿಹಾರ ಸಾಮಗ್ರಿಗಳು ಸೇರಿದಂತೆ ಇತರ ಅಗತ್ಯ ನೆರವನ್ನು ಅವರಿಗೆ ನೀಡುತ್ತಿದೆ.
ತನ್ನ ಸಂಪನ್ಮೂಲ, ಸದಸ್ಯರು, ಸ್ವಯಂಸೇವಕರು ಮತ್ತು ಸಹಾಯಕ ಸಂಸ್ಥೆಗಳ ಜೊತೆ ಸೇರಿ ಸೇವಾ ಭಾರತಿಯು ಆಹಾರ ಸಾಮಗ್ರಿಗಳನ್ನು ಮತ್ತು ನೈರ್ಮಲ್ಯದ ಸಾಮಗ್ರಿಗಳನ್ನು ಅಸ್ಸಾಂನ ಹಲವಾರು ಕಡೆಗಳಿಗೆ ವಿತರಣೆ ಮಾಡಿದೆ. ಸ್ಥಳೀಯ ಆಡಳಿತಗಳು ಸೇವಾಭಾರತಿಗೆ ಸಾಕಷ್ಟು ನೆರವನ್ನು ನೀಡುತ್ತಿದೆ. ಇದರಿಂದಾಗಿ ಅವರು ಪರಿಹಾರ ಸಾಮಗ್ರಿಗಳನ್ನು ಸುಲಲಿತವಾಗಿ ವಿತರಣೆ ಮಾಡುತ್ತಿದ್ದಾರೆ.
ಸದಸ್ಯರು ಮತ್ತು ಸ್ವಯಂಸೇವಕರು ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಕ್ಕಿ, ದಾಲ್, ಉಪ್ಪು, ಎಣ್ಣೆ, ತರಕಾರಿ, ಸಾಬೂನು, ಸ್ಯಾನಿಟೈಝರ್, ಮಾಸ್ಕ್ ಇತ್ಯಾದಿಗಳನ್ನು ಪ್ಯಾಕ್ ಮಾಡಿ ಅಗತ್ಯವಿರುವ ಜನರಿಗೆ ವಿತರಣೆ ಮಾಡುತ್ತಿದ್ದಾರೆ.
ಕೆಲವು ಸ್ವಯಂಸೇವಕರು ಆಹಾರ ಸಾಮಾಗ್ರಿಗಳ ವಿತರಣೆಯಲ್ಲಿ ನಿರತರಾಗಿದ್ದರೆ, ಕೆಲವು ಸ್ವಯಂಸೇವಕರು ಹಲವು ಪ್ರದೇಶಗಳಲ್ಲಿ ನೈರ್ಮಲ್ಯ ಅಭಿಯಾನಗಳನ್ನು ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.