ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರಕಾರವು ಸಂಸದರ ಮತ್ತು ಸಚಿವರ ವೇತನವನ್ನು ಶೇಕಡ 30ರಷ್ಟು ಕಡಿತಗೊಳಿಸಿದೆ. ಪಾರ್ಲಿಮೆಂಟ್ ಸದಸ್ಯರ ಕಾಯ್ದೆ, 1954ರ ಅನ್ವಯ ಸುಗ್ರೀವಾಜ್ಞೆಯನ್ನು ಅನುಮೋದಿಸಿ ವೇತನವನ್ನು ಕಡಿತಗೊಳಿಸಲಾಗಿದೆ.
ಏಪ್ರಿಲ್ 1 ರಿಂದ ಒಂದು ವರ್ಷಗಳ ಕಾಲ ಸಂಸದರ ಮತ್ತು ಸಚಿವರುಗಳ ವೇತನ ಶೇಕಡ 30 ರಷ್ಟು ಕಡಿತವಾಗಲಿದೆ.
ಇದರ ಕಾರಣದಿಂದಾಗಿ, 2020- 21ರ ಹಣಕಾಸು ಸಾಲಿನಲ್ಲಿ ಸಂಸದರ ಭತ್ಯೆ ಮತ್ತು ಪಿಂಚಣಿ ಕೂಡ ಕಡಿತವಾಗಲಿದೆ.
ಅಲ್ಲದೆ, ಎರಡು ವರ್ಷಗಳ ಅವಧಿಗೆ ಸಂಸದರ ಸ್ಥಳೀಯ ಅಭಿವೃದ್ಧಿ ಯೋಜನೆ ನಿಧಿ ಕೂಡ ಸ್ಥಗಿತಗೊಳ್ಳಲಿದೆ ಮತ್ತು ಸಂಯೋಜಿತ ರೂ.7,900 ಅನ್ನು ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿರ್ವಹಿಸಲು ಬಳಸಿಕೊಳ್ಳಲಾಗುತ್ತದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ರಾಜ್ಯಗಳ ರಾಜ್ಯಪಾಲರುಗಳು ತಮ್ಮ ವೇತನದಲ್ಲಿ ಶೇಕಡ 30 ರಷ್ಟು ಕಡಿತಗೊಳಿಸಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.