ನವದೆಹಲಿ: ಯಮುನಾ ನದಿ ನೀರು ಸಾಕಷ್ಟು ಪ್ರಮಾಣದಲ್ಲಿ ಸ್ವಚ್ಛಗೊಂಡಿದೆ ಎಂಬುದಾಗಿ ತಜ್ಞರುಗಳು ತಿಳಿಸಿದ್ದಾರೆ. ಕೆಲದಿನಗಳಿಂದ ಮಾನವ ಚಟುವಟಿಕೆಗಳು ಕುಗ್ಗಿದ ಪರಿಣಾಮದಿಂದಾಗಿ ಕೇವಲ ಯಮುನಾನದಿ ಮಾತ್ರವಲ್ಲದೆ ದೇಶದ ಇತರ ನದಿಗಳು ಕೂಡ ಸ್ವಚ್ಛವಾಗುತ್ತಿವೆ.
ಕರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ 21 ದಿನಗಳ ಲಾಕ್ ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಕಾರ್ಖಾನೆಗಳು ಸೇರಿದಂತೆ ಮಾನವನ ಇತರ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ಪರಿಸರವು ಸ್ವಚ್ಛವಾಗುತ್ತಿದೆ. ನದಿ ನೀರು ಶುಭ್ರವಾಗುತ್ತಿದೆ.
“ಲಾಕ್ಡೌನ್ ಕಾರಣದಿಂದಾಗಿ ಫ್ಯಾಕ್ಟರಿಗಳು ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಿವೆ. ಹೀಗಾಗಿ ಕೊಳಚೆಗಳು ಯಮುನಾ ನದಿಯನ್ನು ಸೇರುತ್ತಿಲ್ಲ. ನದಿ ನೀರು ಶುದ್ಧವಾಗಿ ಹರಿಯುತ್ತಿದೆ” ಎಂದು ಸಾಮಾಜಿಕ ಹೋರಾಟಗಾರ ಗೋಪೇಶ್ವರ್ ನಾಥ್ ಚತುರ್ವೇದಿ ಹೇಳಿದ್ದಾರೆ.
ಅಪಾರ ಪ್ರಮಾಣದ ಜನರು ಸ್ನಾನವನ್ನು ಮಾಡುತ್ತಿದ್ದ ಕಾರಣದಿಂದಾಗಿ ಮತ್ತು ಹೂವಿನಹಾರ ಸೇರಿದಂತೆ ಇತರ ಪೂಜಾ ಸ್ವತ್ತುಗಳನ್ನು ನದಿ ನೀರಿಗೆ ಎಸೆಯುತ್ತಿದ್ದ ಪರಿಣಾಮವಾಗಿ ಯಮುನಾ ನದಿ ಮಲಿನವಾಗುತ್ತಿತ್ತು. ಆದರೆ ಕೆಲದಿನಗಳಿಂದ ಇಂತಹ ಯಾವುದೇ ಚಟುವಟಿಕೆಗಳು ಅಲ್ಲಿ ನಡೆಯುತ್ತಿಲ್ಲ.
ಲಾಕ್ಡೌನ್ ಕಾರಣದಿಂದಾಗಿ ದೇಶ ಮಾತ್ರವಲ್ಲ ಜಗತ್ತಿನಲ್ಲಿ ವಾಯುಮಾಲಿನ್ಯ ಸಾಕಷ್ಟು ಪ್ರಮಾಣದಲ್ಲಿ ತಗ್ಗಿದೆ ಎಂದು ಪರಿಸರ ತಜ್ಞರು ಹೇಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.