ನವದೆಹಲಿ: ಏಪ್ರಿಲ್ 5 ರಂದು ಭಾನುವಾರ ರಾತ್ರಿ 9 ಗಂಟೆಗೆ 90 ನಿಮಿಷಗಳ ಕಾಲ ದೀಪವನ್ನು ಹಚ್ಚಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮನೆಯ ವಿದ್ಯುತ್ ದೀಪಗಳನ್ನು ಆರಿಸುವಂತೆಯೂ ಅವರು ಸೂಚಿಸಿದ್ದಾರೆ. ಮೋದಿಯವರ ಈ ಕರೆಗೆ ದೇಶವ್ಯಾಪಿಯಾಗಿ ಬೆಂಬಲಗಳು ವ್ಯಕ್ತವಾಗುತ್ತಿವೆ.
ಮೋದಿಯವರ ಕರೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿಯ ನಿವಾಸಿಯೊಬ್ಬರು, “ನಾವು ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಇದ್ದೇವೆ. ನಾವು ದೀಪಗಳನ್ನು ಬೆಳಗಿಸುತ್ತೇವೆ ಮತ್ತು ಮನೆಯೊಳಗೆ ಇರುತ್ತೇವೆ. ದೇಶದ ಎಲ್ಲಾ ನಾಗರಿಕರು ಕಡೆದನು ಮಾಡಲಿ ಎಂದು ನಾನು ಮನವಿ ಮಾಡುತ್ತೇನೆ. ಅನಗತ್ಯವಾಗಿ ಯಾರು ಕೂಡ ಮನೆಯ ಹೊರಗೆ ಬರಬಾರದು” ಎಂದಿದ್ದಾರೆ.
“ಕೊರೋನಾ ವಿರುದ್ಧದ ಹೋರಾಟಕ್ಕೆ ಜೊತೆ ಸೇರೋದು ಅತಿಮುಖ್ಯ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು” ಎಂದಿದ್ದಾರೆ.
ಅಮೃತಸರದ ನಿವಾಸಿ ತರುಣ್ ಚುಗ್ ಅವರು ಮಾತನಾಡಿ, “ನರೇಂದ್ರ ಮೋದಿಯವರು 130 ಕೋಟಿ ಭಾರತೀಯರ ಹೀರೋ ಆಗಿದ್ದಾರೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದಾರೆ. ಲೋಕಲ್ ಒಂಬತ್ತನೇ ದಿನದಂದು ಅವರು ದೇಶವನ್ನು ಉದ್ದೇಶಿಸಿ ಮಾತನಾಡಿ ನಮ್ಮೆಲ್ಲರನ್ನು ಒಗ್ಗಟ್ಟಾಗಿ ಇರುವಂತೆ ಕೇಳಿಕೊಂಡಿದ್ದಾರೆ. ಇಡೀ ದೇಶವೇ ಮೋದಿ ಅವರೊಂದಿಗೆ ಇದೆ. ಕರೋನಾ ವಿರುದ್ಧದ ಹೋರಾಟದಲ್ಲಿ ನಾವು ಜಯಗಳಿಸಿಯೇ ತೀರುತ್ತೇವೆ” ಎಂದಿದ್ದಾರೆ.
ದೇಶಪ್ಯಾಪಿಯಾದ ಜನರು ಎಪ್ರಿಲ್ 5ರಂದು ರಾತ್ರಿ 9 ಗಂಟೆಗೆ ದೀಪ ಬೆಳಗಲು ದೇಶದ ಜನರು ಸಜ್ಜಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.