ನವದೆಹಲಿ: ದೇಶದ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಉತ್ತೇಜನವನ್ನು ನೀಡುವ ಸಲುವಾಗಿ ಕೇಂದ್ರ ಸರ್ಕಾರವು ‘ಆರೋಗ್ಯ ಸೇತು’ ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಿದೆ. ಕೋವಿಡ್-19 ಪತ್ತೆಹಚ್ಚುವ ಆ್ಯಪ್ ಇದಾಗಿದೆ.
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಆ್ಯಪ್ನ್ನು ಅಭಿವೃದ್ಧಿಪಡಿಸಿದೆ. ನ್ಯಾಷನಲ್ ಇನ್ಫಾರ್ಮೆಟಿಕ್ ಸೆಂಟರ್ನಲ್ಲಿ ಈ ಆ್ಯಪ್ ಅನ್ನು ಕೇವಲ ನಾಲ್ಕು ದಿನಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಭಾರತ ಸರಕಾರದ ಅದರಲ್ಲೂ ಪ್ರಮುಖವಾಗಿ ಆರೋಗ್ಯ ಸಚಿವಾಲಯದ ಕಾರ್ಯಕ್ರಮಗಳ ವಿವರಗಳನ್ನು ಇದು ನೀಡಲಿದೆ. ಅಲ್ಲದೆ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿನ ಅತ್ಯುತ್ತಮ ಮಾಹಿತಿಗಳನ್ನು ಕೂಡ ಜನರಿಗೆ ನೀಡಲಿದೆ.
ಮಾತ್ರವಲ್ಲದೆ, ಆ್ಯಪ್ ಬಳಕೆದಾರರ ಸ್ಮಾರ್ಟ್ಫೋನ್ ಲೊಕೇಶನ್ ಮತ್ತು ಬ್ಲೂಟೂತ್ ಬಳಸಿ ಅವರು ಸೋಂಕಿನ ವ್ಯಾಪ್ತಿಗೆ ಬಂದಿದ್ದಾರೆಯೇ ಎಂಬ ಮಾಹಿತಿಯನ್ನು ರವಾನಿಸುತ್ತದೆ. ಮಾತ್ರವಲ್ಲದೆ ಇದು, ವ್ಯಕ್ತಿಗಳು ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಿ ತಕ್ಷಣವೇ ಅದರ ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸುತ್ತದೆ.
ಪ್ರತಿ ರಾಜ್ಯಗಳ ಸಹಾಯವಾಣಿಗಳ ಸಂಖ್ಯೆಯನ್ನು ಇದು ಹೊಂದಿದೆ. ಮಾತ್ರವಲ್ಲದೆ ಪ್ರಶ್ನೋತ್ತರ ವಿಭಾಗವನ್ನು ಕೂಡ ಇದು ಹೊಂದಿದೆ.
ಈಗಾಗಲೇ ಹಲವು ರಾಜ್ಯಗಳು ತಮ್ಮದೇ ಆದ ಕೊರೋನವೈರಸ್ ಹೋರಾಟಕ್ಕೆ ಸಂಬಂಧಿಸಿದ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.