ನವದೆಹಲಿ : ದೇಶವ್ಯಾಪಿ ಲಾಕ್ ಡೌನ್ ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರಿಗೆ ಮತ್ತು ಇತರ ನಿರ್ಗತಿಕರಿಗೆ ಆಹಾರ ಮತ್ತು ವಸತಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಸ್ಥಳೀಯಾಡಳಿತಗಳಿಗೆ ನೆರವಾಗುವಂತೆ ಕೇಂದ್ರ ಸರಕಾರವು 90,000 ಎನ್ ಜಿ ಓಗಳಿಗೆ ಸೂಚನೆಯನ್ನು ನೀಡಿದೆ.
ಎನ್ ಜಿ ಓ ದರ್ಪನ್ ಪೋರ್ಟಲ್ ಮೂಲಕ ಎಲ್ಲಾ ಎನ್ಜಿಓಗಳಿಗೆ ಕೇಂದ್ರ ಸರ್ಕಾರವು ಪತ್ರವನ್ನು ಬರೆದಿದ್ದು, ಸ್ಥಳೀಯ ಆಡಳಿತಕ್ಕೆ ಕಮ್ಯೂನಿಟಿ ಕಿಚನ್ ಸ್ಥಾಪನೆ ಮಾಡುವಲ್ಲಿ ಮತ್ತು ವಲಸಿಗರಿಗೆ ಮತ್ತು ನಿರ್ಗತಿಕರಿಗೆ ನಗರಗಳಲ್ಲಿ ವಸತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ನೆರವಾಗುವಂತೆ ಸೂಚನೆ ನೀಡಿದೆ.
ಮಾತ್ರವಲ್ಲದೆ, ಸೋಪು, ಸ್ಯಾನಿಟೈಸರ್, ಮಾಸ್ಕ್ ಮತ್ತು ಗ್ಲೌಸ್ಗಳು ಸೇರಿದಂತೆ ಇತರ ವೈಯಕ್ತಿಕ ರಕ್ಷಣಾತ್ಮಕ ಪರಿಕರಗಳ ಕಿಟ್ ಅನ್ನು ಹಂಚಿಕೆ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡುವಂತೆ ನಾಗರಿಕ ಸಮಾಜದ ಸಂಸ್ಥೆಗಳಿಗೂ ಮನವಿಯನ್ನು ಮಾಡಿಕೊಳ್ಳಲಾಗಿದೆ
ಮಾತ್ರವಲ್ಲದೆ ಸೋಂಕು ತಡೆಗಟ್ಟುವ ವಿಧಾನ, ನೈರ್ಮಲ್ಯ, ಸಾಮಾಜಿಕ ಅಂತರ, ಪ್ರತ್ಯೇಕವಾಸ ಇತ್ಯಾದಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆಯೂ ಎನ್ಜಿಓಗಳಿಗೆ ತಿಳಿಸಲಾಗಿದೆ.
ದಿವ್ಯಾಂಗರಿಗೆ, ಅನಾರೋಗ್ಯ ಪೀಡಿತರಿಗೆ, ಹಿರಿಯ ನಾಗರಿಕರಿಗೆ, ಮಕ್ಕಳಿಗೆ, ಮಂಗಳಮುಖಿಯರಿಗೆ ಮತ್ತು ಸಮಾಜದ ಇತರ ಹಿಂದುಳಿದ ವರ್ಗಗಳಿಗೆ ಈ ಸಂಕಷ್ಟದ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.