ನವದೆಹಲಿ: ಕೊರೋನವೈರಸ್ ಮಹಾಮಾರಿಯ ಪರಿಣಾಮವಾಗಿ ಭಾರತ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶದಲ್ಲಿ ಲಾಕ್ಡೌನ್ ಅನ್ನೋ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಡವರಿಗೆ ದೊಡ್ಡಮಟ್ಟದ ಹೊಡೆತ ಬೀಳುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವಾರು ಸಂಘ-ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಬಡವರಿಗೆ ಆಹಾರವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಭಾರತೀಯ ರೈಲ್ವೆಯ ಕ್ಯಾಟರಿಂಗ್ ಅಂಗ ಐಆರ್ಸಿಟಿಸಿಯು ಭಾನುವಾರ ಸುಮಾರು 11,030 ಊಟಗಳನ್ನು ಬಡವರಿಗೆ ಮತ್ತು ಅಗತ್ಯ ಇರುವವರಿಗೆ ಪೂರೈಕೆ ಮಾಡಿದೆ.
ಲೆಮನ್ ರೈಸ್ನಿಂದ ಹಿಡಿದು ಕಿಚಡಿ ಚೋಕ, ಖಡಿ ಚಾವಲ್ವರೆಗೆ ಸ್ಥಳೀಯ ಆಹಾರ ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಐಆರ್ಸಿಟಿಸಿ ಆಹಾರವನ್ನು ಪೂರೈಕೆ ಮಾಡಿದೆ.
ಪೊಲೀಸ್ ಅಧಿಕಾರಿಗಳು, ದೆಹಲಿ ಆಡಳಿತದ ಅಧಿಕಾರಿಗಳು, ವಲಸಿಗ ಕಾರ್ಮಿಕರು, ವೃದ್ಧಾಶ್ರಮಗಳಿಗೆ ಆಹಾರಗಳನ್ನು ಪೂರೈಕೆ ಮಾಡಲಾಗಿದೆ.
2,030 ಊಟಗಳನ್ನು ದೆಹಲಿ ಆಡಳಿತಕ್ಕೆ, 1,500 ಊಟಗಳನ್ನು ದೆಹಲಿ ಪೊಲೀಸರಿಗೆ, 1,500 ಊಟಗಳನ್ನು ರೈಲ್ವೇ ಪ್ರೋಟೆಕ್ಷನ್ ಫೋರ್ಸ್ಗೆ ಪೂರೈಕೆ ಮಾಡಲಾಗಿದೆ.
ಪಾಟ್ನಾ, ಬಂಗಾಳ, ರಾಂಚಿ ಮತ್ತು ಜೆಮ್ಶೆಡ್ ಪುರದಲ್ಲೂ ಆಹಾರಗಳನ್ನು ಪೂರೈಕೆ ಮಾಡಲಾಗಿದೆ. ಮಾತ್ರವಲ್ಲದೆ ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲೂ ಐಆರ್ಸಿಟಿಸಿ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.