ರಾಂಚಿ : ಕೊರೋನಾವೈರಸ್ ಮಹಾಮಾರಿ ದೇಶವ್ಯಾಪಿಯಾಗಿ ಆತಂಕವನ್ನು ಸೃಷ್ಟಿ ಮಾಡಿರುವ ಸಂದರ್ಭದಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಇಲ್ಲಿ 11 ಮಂದಿ ವಿದೇಶಿ ಮುಸ್ಲಿಂ ಮೌಲ್ವಿಗಳು ತಮ್ಮ ಗುರುತನ್ನು ಬಚ್ಚಿಟ್ಟು ಮಸೀದಿಯೊಂದರಲ್ಲಿ ಅಡಗಿ ಕುಳಿತುಕೊಂಡಿದ್ದಾರೆ.
ರಾಂಚಿಯ ತಮರ್ ಪ್ರದೇಶದ ಮಸೀದಿಯೊಂದರಲ್ಲಿ ಮೂರು ಚೈನೀಸ್ ಮೌಲ್ವಿಗಳು ಸೇರಿದಂತೆ 11 ಮಂದಿ ವಿದೇಶಿ ಮೌಲ್ವಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರಲ್ಲಿ ಮೂರು ಮಂದಿ ಕಜಕಿಸ್ಥಾನ ಮತ್ತು ನಾಲ್ಕು ಮಂದಿ ಕರ್ಗೀಸ್ಥಾನದವರು ಎಂದು ಹೇಳಲಾಗಿದೆ. ಮೂವರು ಚೀನಾದವರಾಗಿದ್ದಾರೆ. ಇವರೆಲ್ಲರೂ ಮಸೀದಿ ಒಳಗೆ ಅಡಗಿ ಕುಳಿತುಕೊಂಡಿದ್ದರು.
ವರದಿಗಳ ಪ್ರಕಾರ, ಬುಂದು ಪ್ರದೇಶದ ಡಿಎಸ್ಪಿ ಅವರು, 11 ಮಂದಿ ಮೌಲ್ವಿಗಳು ಮಸೀದಿಯೊಳಗೆ ಅಡಗಿಕೊಂಡ ಬಗ್ಗೆ ಮಾಹಿತಿಯನ್ನು ನಿನ್ನೆ ಸಂಜೆ ಪಡೆದುಕೊಂಡರು. ಬಳಿಕ ಡಿಎಸ್ಪಿ ಅವರು ತಮ್ಮ ತಂಡದೊಂದಿಗೆ ಮಸೀದಿ ಮೇಲೆ ದಾಳಿ ಮಾಡಿ 11 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
11 ಮಂದಿಯ ಪಾಸ್ಪೋರ್ಟ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಮತ್ತು ಇವರನ್ನು ಪೊಲೀಸ್ ವಿಚಾರಣೆಗೆ ಒಳಪಡಿಸಲಾಗಿದೆ.
ಪೊಲೀಸರು ಇವರನ್ನು ವಶಕ್ಕೆ ಪಡೆದ ಬಳಿಕ ತಕ್ಷಣವೇ ಇವರನ್ನು ಕ್ವಾರಂಟೈನ್ ಸೌಲಭ್ಯಕ್ಕೆ ಸ್ಥಳಾಂತರಗೊಳಿಸಲಾಗಿದೆ. ಅಲ್ಲಿಯೇ ಇವರ ವಿಚಾರಣೆ ಮುಂದುವರೆಯುತ್ತಿದೆ. ಎಲ್ಲರನ್ನೂ ಕೂಡ ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾರಿಗೂ ಪಾಸಿಟಿವ್ ಬಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವರದಿಗಳ ಪ್ರಕಾರ, ಈ ಮೌಲ್ವಿಗಳು ದೆಹಲಿಯಿಂದ ಜೆಮ್ಶೆಡ್ ಪುರಕ್ಕೆ ಪ್ರಯಾಣಿಸಿದ್ದರು. ಮಾರ್ಚ್ 19ರಂದು ರಾಂಚಿಗೆ ಆಗಮಿಸಿದ್ದರು ಮತ್ತು ಅಲ್ಲಿಯ ಮಸೀದಿಯೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದರು.
ವೈರಸ್ ಪೀಡಿತ ದೇಶವೊಂದರಿಂದ ಆಗಮಿಸಿದ ವರನ್ನು ಈ ರೀತಿಯಾಗಿ ಬಚ್ಚಿಟ್ಟುಕೊಂಡಿರುವ ಪ್ರಕರಣ ನಿಜಕ್ಕೂ ಆಘಾತಕಾರಿಯಾಗಿದೆ. ಬಿಹಾರದ ಪಾಟ್ನಾದಲ್ಲಿ 12 ವಿದೇಶಿ ಪ್ರಜೆಗಳು ಬಚ್ಚಿಟ್ಟುಕೊಂಡಿದ್ದ ಇತ್ತೀಚಿಗೆ ಬಹಿರಂಗಗೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.