ಚೆನ್ನೈ: ವಿದೇಶಗಳಿಂದ ಬಂದ ಇಸ್ಲಾಮಿಕ್ ಧರ್ಮಗುರುಗಳ ತಂಡ ತಮಿಳುನಾಡು ಮತ್ತು ಈಶಾನ್ಯ ಭಾರತದ ಹಲವು ನಗರಗಳಲ್ಲಿ ಬೀಡುಬಿಟ್ಟಿದ್ದು ಆತಂಕವನ್ನು ಸೃಷ್ಟಿ ಮಾಡಿದೆ. ಕೊರೋನ ಆತಂಕ ಮನೆ ಮಾಡಿರುವ ಈ ಸಂದರ್ಭದಲ್ಲಿ ಅವರು ಯಾವ ಕಾರಣಕ್ಕೆ ಭಾರತಕ್ಕೆ ಆಗಮಿಸಿದ್ದಾರೆ ಎಂಬ ಬಗ್ಗೆ ಈಗ ಸಂಶಯಗಳು ವ್ಯಕ್ತವಾಗುತ್ತಿದೆ. ಅದು ಕೂಡ ಸ್ಥಳೀಯ ಪೊಲೀಸರ ಮತ್ತು ಗುಪ್ತಚರ ಇಲಾಖೆಯ ಮತ್ತು ವಲಸೆ ಅಧಿಕಾರಿಗಳ ಕಣ್ಣು ತಪ್ಪಿಸಿ ಅವರು ಹೇಗೆ ಮಸೀದಿಗಳಲ್ಲಿ ಉಳಿದುಕೊಂಡಿದ್ದಾರೆ ಎಂಬುದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ, ಅವರಲ್ಲಿ ಹಲವಾರು ಮಂದಿಗೆ ಕೊರೋನಾವೈರಸ್ ದೃಢಪಟ್ಟಿದೆ ಎನ್ನಲಾಗಿದೆ.
ಈರೋಡ್ ಜಿಲ್ಲೆಯ ಆಸ್ಪತ್ರೆಯಲ್ಲಿ ಎರಡು ಕೋವಿಡ್-19 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಮುಸ್ಲಿಂ ಧಾರ್ಮಿಕ ಮುಖಂಡರು ಬಳಕೆ ಮಾಡುತ್ತಿದ್ದ ಪೆರುನ್ದುರೈನ್ನ 6 ಬೀದಿಗಳನ್ನು ಜಿಲ್ಲಾಡಳಿತವು ಸೀಲ್ ಮಾಡಿದೆ. ಪ್ರವಾಸಿಗಳ ಹೆಸರಿನಲ್ಲಿ ಇವರುಗಳು ಥಾಯ್ ಮತ್ತು ಇತರ ಮುಲ್ಲಾಗಳ ಸಭೆಗಳನ್ನು ನಡೆಸಿದ್ದಾರೆ ಎಂದು ಹೇಳಲಾಗಿದೆ.
ಮಾರ್ಚ್ 12 ರಂದು ಥೈಲ್ಯಾಂಡಿನ 7 ಮಂದಿ ಈರೋಡು ಜಿಲ್ಲೆಗೆ ಆಗಮಿಸಿದ್ದಾರೆ. ಮಾರ್ಚ್ 15 ರ ವರೆಗೆ ಇವರುಗಳು ಪೆರುನ್ದುರೈನ ಮಸೀದಿಗಳಲ್ಲಿ ತಂಗಿದ್ದಾರೆ. ಅದರಲ್ಲಿ ಓರ್ವ ಕೊಯಂಬತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಈರೋಡ್ ಜಿಲ್ಲೆಯಲ್ಲಿ ಮಾರ್ಚ್ 12 ರಂದು ಎರಡು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಜಿಲ್ಲಾಡಳಿತವು 136 ಮಂದಿಯನ್ನು ಕ್ವಾರಂಟೈನ್ನಲ್ಲಿ ಇಟ್ಟಿದೆ. ಮುಂದಿನ ಆದೇಶದವರೆಗೂ 9 ಬೀದಿಗಳನ್ನು ಸೀಲ್ ಮಾಡಿದೆ. ಥೈಲ್ಯಾಂಡ್ ಮೂಲದ ಮುಸ್ಲಿಮರು ನೆಲೆಸಿದ್ದ ಬೀದಿಯನ್ನು ಸೀಲ್ ಮಾಡಲಾಗಿದೆ.
ಸೇಲಂ ಜಿಲ್ಲೆಯ ಮೋಹನ್ ಕುಮಾರಮಂಗಲ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 11 ಮಂದಿ ಇಂಡೋನೇಷ್ಯ ಪ್ರಜೆಗಳನ್ನು ಮತ್ತು 5 ಮಂದಿ ಮುಸ್ಲಿಂರನ್ನು ಕ್ವಾರಂಟೈನ್ ಮಾಡಲಾಗಿದೆ. ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇವರು ಇಲ್ಲಿಗೆ ಬಂದಿದ್ದರು ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಾರೆ. ವಿವಿಧ ಮಸೀದಿಗಳಲ್ಲಿ ಇವರುಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.
ಇನ್ನು ವೆಲ್ಲೂರು ಜಿಲ್ಲೆಯ ಅಂಬೂರ್ ಪ್ರದೇಶದಲ್ಲಿ 12 ಮಂದಿ ಇಂಡೋನೇಷ್ಯಾ ಮತ್ತು ಎಂಟು ಮಂದಿ ಮಯನ್ಮಾರ್ ಮುಸ್ಲಿಂ ಧರ್ಮಗುರುಗಳನ್ನು ವಶಕ್ಕೆ ಪಡೆಯಲಾಗಿದೆ.
ಇವರು ಯಾವ ಕಾರಣಕ್ಕೆ ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದೆ. ಆದರೆ ಸ್ಥಳೀಯ ಮುಸ್ಲಿಂ ಮುಖಂಡರ ಪ್ರಕಾರ, ಸಭೆಗಳಲ್ಲಿ ಭಾಗವಹಿಸಲು ಇವರುಗಳನ್ನು ಇಲ್ಲಿಗೆ ಕರೆಯಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.