News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೋವಿಡ್-19 : ತನ್ನ ರೆಸಾರ್ಟ್‌ನ್ನು ಕೇರ್ ಫೆಸಿಲಿಟಿಯಾಗಿ ಪರಿವರ್ತಿಸುವಂತೆ ಹೇಳಿದ ಮಹೀಂದ್ರ ಗ್ರೂಪ್

ನವದೆಹಲಿ: ಕೊರೋನ ವೈರಸ್ ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಆಟೊಮೊಬೈಲ್ ದಿಗ್ಗಜ ಮಹೇಂದ್ರ ಗ್ರೂಪ್, ತನ್ನ ರೆಸಾರ್ಟ್‌ನ್ನು ಕೇರ್ ಫೆಸಿಲಿಟಿಯಾಗಿ ಪರಿವರ್ತಿಸುವಂತೆ ಸರ್ಕಾರಕ್ಕೆ ತಿಳಿಸಿದೆ.

ಮಹೇಂದ್ರ ಗ್ರೂಪ್ ಮುಖ್ಯಸ್ಥ ಆನಂದ್ ಮಹೇಂದ್ರ ಅವರು ಭಾನುವಾರ ಟ್ವೀಟ್ ಮಾಡಿ, “ಅನಿಶ್ಚಿತ ಬೆದರಿಕೆಯ ವಿರುದ್ದ ಹೋರಾಡುವ ಸಲುವಾಗಿ ಮಹೇಂದ್ರ ಗ್ರೂಪ್ ತನ್ನ ತಯಾರಿಕಾ ಸೌಲಭ್ಯಗಳನ್ನು ಯಾವ ರೀತಿಯಲ್ಲಿ ವೆಂಟಿಲೇಟರ್­ಗಳಾಗಿ ಪರಿವರ್ತಿಸಬಹುದು ಎಂಬ ಬಗ್ಗೆ ಚಿಂತನೆ ನಡೆಸುತ್ತಿದೆ. ನಮ್ಮ ರೆಸಾರ್ಟ್ ಗಳನ್ನು ತಾತ್ಕಾಲಿಕ ಕೇರ್ ಫೆಸಿಲಿಟಿಗಳಾಗಿ ಪರಿವರ್ತಿಸಲು ನಾವು ಸಿದ್ಧರಿದ್ದೇವೆ” ಎಂದಿದ್ದಾರೆ.

ಹಲವು ವರದಿಗಳನ್ನು ಗಮನಿಸುತ್ತಿದ್ದರೆ ಭಾರತ ಈಗಾಗಲೇ ಕೊರೋನವೈರಸ್ ಮೂರನೇ ಹಂತಕ್ಕೆ ತಲುಪಿದೆ ಎಂದನಿಸುತ್ತಿದೆ. ಒಂದು ವೇಳೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿದೆ ನಮ್ಮ ವೈದ್ಯಕೀಯ ಮೂಲಸೌಕರ್ಯಗಳ ಕೊರತೆ ನಮ್ಮನ್ನು ಬಾಧಿಸಲಿದೆ ಎಂದಿದ್ದಾರೆ.

ಪ್ರಸ್ತುತ ಸನ್ನಿವೇಶದಿಂದ ಹೆಚ್ಚು ಹೊಡೆತ ಅನುಭವಿಸುತ್ತಿರುವ ಸಣ್ಣ ಉದ್ಯಮಗಳು ಮತ್ತು ಸ್ವ ಉದ್ಯೋಗಿಗಳಿಗೆ ಸಹಾಯ ಮಾಡುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಈ ಉದ್ದೇಶಕ್ಕಾಗಿ ನಿಧಿ ರಚಿಸಲು ತನ್ನ ವೇತನದ ಶೇ‌. 100 ರಷ್ಟನ್ನು ನೀಡುವುದಾಗಿ ಅವರು ಹೇಳಿದ್ದಾರೆ.

“ನನು ಶೇಕಡ ನೂರರಷ್ಟು ನನ್ನ ವೇತನವನ್ನು ಈ ಕಾರಣಕ್ಕಾಗಿ ನೀಡುತ್ತೇನೆ. ಮುಂದಿನ ತಿಂಗಳಲ್ಲಿ ಇನ್ನಷ್ಟನ್ನು ನೀಡುತ್ತೇನೆ. ಪ್ರಸ್ತುತ ಸನ್ನಿವೇಶದಿಂದ ತೀವ್ರವಾಗಿ ನಷ್ಟ ಅನುಭವಿಸುತ್ತಿರುವ ಜನರಿಗೆ ಸಹಾಯ ಮಾಡಲು ಮುಂದೆ ಬರುವಂತೆ ನಾನು ವಿವಿಧ ಉದ್ಯಮಗಳನ್ನು ಕೇಳಿಕೊಳ್ಳುತ್ತೇನೆ” ಎಂದಿದ್ದಾರೆ.

ಅಲ್ಲದೆ, ತಾತ್ಕಾಲಿಕ ಕೇರ್ ಫೆಸಿಲಿಟಿಗಳನ್ನು ಸ್ಥಾಪನೆ ಮಾಡುವ ಸಲುವಾಗಿ ಸರಕಾರ ಮತ್ತು ಸೇನೆಗೆ ಮಹೇಂದ್ರ ಗ್ರೂಪ್ ಸಹಾಯ ಮಾಡಲಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top