ನವದೆಹಲಿ: ಭಾರತದ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅವರನ್ನು ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ನೇಮಕ ಮಾಡಿದೆ. ಅಲ್ಲದೇ, ಇದು ಐದು ಸದಸ್ಯರ ಗುಂಪಿಗೆ ಮಾಜಿ ವೇಗಿ ಹರ್ವಿಂದರ್ ಸಿಂಗ್ ಅವರನ್ನು ಆಯ್ಕೆ ಮಾಡಿದೆ.
ಮದನ್ ಲಾಲ್, ಆರ್ ಪಿ ಸಿಂಗ್ ಮತ್ತು ಸುಲಕ್ಷನ ನಾಯಕ್ ಅವರನ್ನೊಳಗೊಂಡ ಸಿಎಸಿಯು ಒಟ್ಟು ಇಬ್ಬರು ಆಯ್ಕೆದಾರರನ್ನು ಹೆಸರಿಸಿದ್ದು, ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಎಂಎಸ್ಗೆ ಪ್ರಸಾದ್ (ದಕ್ಷಿಣ ವಲಯ) ಅವರ ಜಾಗಕ್ಕೆ ಜೋಶಿ ಆಯ್ಕೆಯಾಗಿದ್ದಾರೆ. “ಹಿರಿಯ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷರ ಹುದ್ದೆಗಾಗಿ ಸಮಿತಿಯು ಸುನಿಲ್ ಜೋಶಿಯವರನ್ನು ಶಿಫಾರಸು ಮಾಡಿದೆ” ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಷಾ ಅವರ ಹೇಳಿಕೆಯನ್ನು ನೀಡಿದ್ದರು.
ಹರ್ವಿಂದರ್ ಅವರನ್ನು ಕೇಂದ್ರ ವಲಯದಿಂದ ಆಯ್ಕೆ ಮಾಡಲಾಗಿದೆ ಮತ್ತು ಅವರು ಸಮಿತಿಯಲ್ಲಿನ ಗಗನ್ ಖೋಡಾ ಅವರನ್ನು ರಿಪ್ಲೇಸ್ ಮಾಡಲಿದ್ದಾರೆ. ಆಯ್ಕೆ ಸಮಿತಿಯಲ್ಲಿ ಪ್ರಸ್ತುತ ಇರುವ ಸದಸ್ಯರೆಂದರೆ ಜಟೈನ್ ಪರಂಜಪೆ (ಪಶ್ಚಿಮ), ದೇವಾಂಗ್ ಗಾಂಧಿ (ಪೂರ್ವ) ಮತ್ತು ಸರಂದೀಪ್ ಸಿಂಗ್ (ಉತ್ತರ).
ಸಂದರ್ಶನಕ್ಕಾಗಿ ಸಿಎಸಿಯು ಐದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅವರೆಂದರೆ ಸುನೀಲ್ ಜೋಶಿ, ಹರವಿಂದರ್, ವೆಂಕಟೇಶ್ ಪ್ರಸಾದ್, ರಾಜೇಶ್ ಚೌಹಾ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.