ಭುವನೇಶ್ವರ: ಒರಿಸ್ಸಾದ ಕೊನಾರ್ಕ್ನ ಪ್ರಸಿದ್ಧ ಸೂರ್ಯ ದೇವಾಲಯದ ಜಗ ಮೋಹನ್ (ಅಸೆಂಬ್ಲಿ ಹಾಲ್) ನಲ್ಲಿ ತುಂಬಿದ ಮರಳನ್ನು ತೆಗೆದುಹಾಕಲು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ನಿರ್ಧರಿಸಿದೆ. ದೇವಾಲಯದ ಸ್ಥಿರತೆಗಾಗಿ ಒಂದು ಶತಮಾನದ ಹಿಂದೆ ಬ್ರಿಟಿಷರು ಮರಳನ್ನು ಇಲ್ಲಿ ತುಂಬಿದ್ದರು.
ಕೊನಾರ್ಕ್ನಲ್ಲಿ ಇತ್ತೀಚೆಗಷ್ಟೇ ಕೊನೆಗೊಂಡ ‘ಸೂರ್ಯ ದೇವಾಲಯದ ಸಂರಕ್ಷಣೆ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಮಾಹಿತಿಯನ್ನು ನೀಡಿದರು.
“ಪ್ರತಿಯೊಬ್ಬರೂ ಮರಳನ್ನು ರಚನೆಯಿಂದ ಹೊರತೆಗೆಯುವುದನ್ನು ನೋಡಲು ಕಾಯುತ್ತಿದ್ದಾರೆ. ಮರಳು ತೆಗೆಯುವ ವಿಧಾನಗಳ ಬಗ್ಗೆ ವರದಿ ಸಿದ್ಧಪಡಿಸುವಂತೆ ನಾನು ಎಎಸ್ಐಗೆ ಸೂಚಿಸಿದ್ದೇನೆ” ಎಂದು ಪಟೇಲ್ ಹೇಳಿದ್ದಾರೆ.
ಹದಿಮೂರನೆಯ ಶತಮಾನದ ವಿಶ್ವ ಪಾರಂಪಾರಿಕ ತಾಣದ ಬಾಳಿಕೆಯನ್ನು ಕಾಪಾಡುವ ಸಲುವಾಗಿ 1903 ರಲ್ಲಿ ಬ್ರಿಟಿಷ್ ಆಡಳಿತವು ಜಗ ಮೋಹನ್ ಸಭಾಂಗಣವನ್ನು ಮರಳಿನಿಂದ ತುಂಬಿಸಿ ಮೊಹರು ಹಾಕಿತ್ತು. ಅವರು ಜಗ ಮೋಹನ್ ಮೇಲಿನ ಭಾಗದಲ್ಲಿ ರಂಧ್ರವನ್ನು ಕೊರೆದು ಅದರ ಮೂಲಕ ಮರಳನ್ನು ಸುರಿದಿದ್ದರು.
ಆದರೆ, ಬಹಳ ವರ್ಷಗಳ ನಂತರ ದೊಡ್ಡ ಪ್ರಮಾಣದ ಮರಳು ಒಳಗಿನಿಂದ ಗೋಡೆಗಳ ಮೇಲೆ ಬಿರುಕುಗಳನ್ನು ಉಂಟುಮಾಡಲು ಪ್ರಾರಂಭಿಸಿತು. ಸಂಪೂರ್ಣವಾಗಿ ತುಂಬಿದ ಸಭಾಂಗಣದಿಂದ ಮರಳನ್ನು ಹೊರತೆಗೆಯುವುದು ಅಷ್ಟು ಸುಲಭದ ಕಾರ್ಯವಲ್ಲ ಎಂದು ಹೇಳಲಾಗಿದೆ.
ಮರಳು ತೆಗೆಯುವ ಪ್ರಕ್ರಿಯೆಯನ್ನು ಕೈಗೊಳ್ಳಲು, ಎಎಸ್ಐಗೆ ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್ ಐ)ಗೆ ನೆರವು ನೀಡಲಿದೆ, ಇದು 2013 ಮತ್ತು 2018 ರ ನಡುವೆ ದೇವಾಲಯದ ರಚನಾತ್ಮಕ ಸ್ಥಿರತೆಯ ಬಗ್ಗೆ ವೈಜ್ಞಾನಿಕ ಅಧ್ಯಯನವನ್ನು ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.