ನವದೆಹಲಿ: ಒಳನಾಡಿನ ಜಲಮಾರ್ಗಗಳು “ಅರ್ಥ್-ಗಂಗಾ” ಯೋಜನೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ, ಇದು ಸಮಗ್ರ ಬೆಳವಣಿಗೆ ಮತ್ತು ರಾಷ್ಟ್ರೀಯ ಜಲಮಾರ್ಗಗಳ ವಿಸ್ತಾರದಾದ್ಯಂತ ಅಗಾಧವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಿಪ್ಪಿಂಗ್ (ಸ್ವತಂತ್ರ ಖಾತೆ), ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
“ಭಾರತೀಯ ಜನಸಂಖ್ಯೆಯ ಅರ್ಧದಷ್ಟು ಜನರು ಗಂಗಾ ನದಿ ತಟದ ಸುತ್ತಮುತ್ತ ವಾಸಿಸುತ್ತಿದ್ದಾರೆ, ಇದರಲ್ಲಿ ಭಾರತದ 1/5 ನೇ ಸರಕು ಸಾಗಣೆಗಳು ಉಗಮವಾಗುತ್ತವೆ ಮತ್ತು 1/3 ನೇ ಸರಕು ಸಾಗಣೆ ಗಂಗಾ ಸುತ್ತಲಿನ ರಾಜ್ಯಗಳಲ್ಲಿ ಅಂತ್ಯವಾಗುತ್ತವೆ” ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಶಿಪ್ಪಿಂಗ್ ಸಚಿವಾಲಯವು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದು, ಇದರ ಪರಿಣಾಮವಾಗಿ ಒಳನಾಡಿನ ಕ್ರೂಸ್ಗಳು 3 ರಿಂದ 9 ಕ್ಕೆ ಹೆಚ್ಚಿವೆ. ಸರಕುಗಳನ್ನು 30,00,000 ಮೆಟ್ರಿಕ್ ಟನ್ನಿಂದ 70,00,000 ಮೆಟ್ರಿಕ್ ಟನ್ಗೆ ಏರಿವೆ ಮತ್ತು ಹಡಗುಗಳು 300 ರಿಂದ 700ಕ್ಕೆ ಏರಿವೆ.
ಶಿಪ್ಪಿಂಗ್ ಸಚಿವಾಲಯವು ಸಣ್ಣ ಜೆಟ್ಟಿಗಳನ್ನು ಅಭಿವೃದ್ಧಿಪಡಿಸುವಂತಹ ಹಲವಾರು ಕಾರ್ಯಗಳನ್ನು ನಡೆಸಿದ್ದು, ಇದು ಸಣ್ಣ ಸಮುದಾಯದವರಿಗೆ ವಿಶೇಷವಾಗಿ ಬನಾರಸ್ನಿಂದ ಹಲ್ಡಿಯಾವರೆಗಿನ 1400 ಕಿ.ಮೀ ಉದ್ದದ ರಾಷ್ಟ್ರೀಯ ಜಲಮಾರ್ಗ-1 ರ ರೈತರು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಪ್ರಯೋಜನವನ್ನು ನೀಡುತ್ತಿದೆ. ಇದರಿಂದ ಸರಕುಗಳ ಸಾಗಣೆಯು ಸುಲಭ ಮತ್ತು ಅಗ್ಗವಾಗುವುದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.