ನವದೆಹಲಿ : ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಪವಿತ್ರ ಗುಹಾ ದೇಗುಲಕ್ಕೆ ವಾರ್ಷಿಕ ತೀರ್ಥಯಾತ್ರೆ ಜೂನ್ 23 ರಿಂದ ಪ್ರಾರಂಭವಾಗಲಿದೆ ಎಂದು ದೇವಾಲಯ ಮಂಡಳಿ ಶುಕ್ರವಾರ ತಿಳಿಸಿದೆ.
ಈ ವರ್ಷದ ತೀರ್ಥಯಾತ್ರೆ ಕಳೆದ ವರ್ಷದ 40 ದಿನಗಳಿಗಿಂತ ಎರಡು ದಿನ ಹೆಚ್ಚಿಗೆ ಇರಲಿದೆ. ಅಂದರೆ 42 ದಿನಗಳ ಕಾಲ ನಡೆಯಲಿದೆ. 2018 ರಲ್ಲಿ ತೀರ್ಥಯಾತ್ರೆ 60 ದಿನಗಳ ಕಾಲ ನಡೆದಿತ್ತು.
ಮಂಡಳಿಯ ಅಧ್ಯಕ್ಷರೂ ಆಗಿರುವ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮರ್ಮು ಅವರ ಅಧ್ಯಕ್ಷತೆಯಲ್ಲಿ ಶ್ರೀ ಅಮರನಾಥ್ಜಿ ದೇವಾಲಯ ಮಂಡಳಿ (ಎಸ್ಎಎಸ್ಬಿ)ಯ 37 ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
”ಜಗನ್ನಾಥ ರಥಯಾತ್ರೆಯ ಪವಿತ್ರ ದಿನವಾದ 2020 ರ ಜೂನ್ 23 ರಿಂದ ಪ್ರಾರಂಭವಾಗಿ 42 ದಿನಗಳ ಕಾಲ ಯಾತ್ರೆ ನಡೆಯಲಿದೆ. ಆಗಸ್ಟ್ 3 ರಂದು ಶ್ರಾವಣ ಪೂರ್ಣಿಮೆ (ರಕ್ಷಾ ಬಂಧನ)ಯ ದಿನ ಯಾತ್ರೆ ಸಮಾಪಣವಾಗಲಿದೆ” ಎಂದು ಮಂಡಳಿ ತಿಳಿಸಿದೆ.
32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ವೈಇಎಸ್ ಬ್ಯಾಂಕಿನ 442 ಗೊತ್ತುಪಡಿಸಿದ ಶಾಖೆಗಳ ಮೂಲಕ ಏಪ್ರಿಲ್ 1 ರಿಂದ ಯಾತ್ರೆಯ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.