ನವದೆಹಲಿ: 2019 ರ ಫೆಬ್ರವರಿ 14ರಂದು ನಡೆದ ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಲೆಥ್ಪೋರಾದಲ್ಲಿನ ತನ್ನ ಶಿಬಿರದಲ್ಲಿ ಸ್ಮಾರಕ ಸ್ತಂಭವನ್ನು ಅರ್ಪಣೆ ಮಾಡಿದೆ.
ಜೈಶೇ-ಇ-ಮೊಹಮ್ಮದ್ ಭಯೋತ್ಪಾದಕ ಅದೀಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ ಕಾರನ್ನು ಓಡಿಸಿ ಬೆಂಗಾವಲು ಪಡೆಗೆ ಗುದ್ದಿದ ಸ್ಥಳದ ಸಮೀಪದಲ್ಲೇ ಇರುವ ಸಿಆರ್ಪಿಎಫ್ ಶಿಬಿರದೊಳಗೆ ಈ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಎಲ್ಲಾ 40 ಸಿಆರ್ಪಿಎಫ್ ಹುತಾತ್ಮರ ಹೆಸರುಗಳನ್ನು ಅವರ ಚಿತ್ರಗಳೊಂದಿಗೆ ಈ ಸ್ಮಾರಕ ಸ್ತಂಭದಲ್ಲಿ ರಚಿಸಲಾಗಿದೆ.
40 ಹುತಾತ್ಮರ ಮನೆಯ ಮಣ್ಣನ್ನು ಈ ಸ್ಮಾರಕಕ್ಕೆ ಹಾಕಲಾಗಿದೆ. ಸ್ಮಾರಕ ಲೋಕಾರ್ಪಣೆಯ ಬಳಿಕ ರಕ್ತದಾನ ಶಿಬಿರವನ್ನು ಯೋಧರು ಆಯೋಜನೆ ಗೊಳಿಸಿದ್ದಾರೆ.
ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಲೆಥ್ಪೋರಾದಲ್ಲಿನ ಸಿಆರ್ಪಿಎಫ್ ಶಿಬಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಆರ್ಪಿಎಫ್ ವಿಶೇಷ ಮಹಾನಿರ್ದೇಶಕ ಜುಲ್ಫಿಕರ್ ಹಸನ್, ಕಾಶ್ಮೀರ ವಲಯದ ಪೊಲೀಸ್ ಮಹಾನಿರ್ದೇಶಕ ರಾಜೇಶ್ ಕುಮಾರ್ ಮತ್ತು ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.