ಚೆನ್ನೈ: ಆರ್ಥಿಕತೆಯು ದೃಢವಾದ ಮಟ್ಟದಲ್ಲಿದೆ, ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದ ‘ಜನ್ ಜನ್ ಕಾ ಬಜೆಟ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಆರ್ಥಿಕತೆಯು ದೃಢವಾದ ಮಟ್ಟದಲ್ಲಿದೆ ಮತ್ತು ಸ್ಥೂಲ ಅರ್ಥಶಾಸ್ತ್ರವು ಅತ್ಯುತ್ತಮವಾಗಿದೆ. ಮೂಲಭೂತ ಅಂಶಗಳು ಪ್ರಬಲವಾಗಿವೆ. ವಿದೇಶಿ ವಿನಿಮಯ ಮೀಸಲು ಮತ್ತು ಎಫ್ಡಿಐ ಹೂಡಿಕೆಗಳು ಗರಿಷ್ಠ ಮಟ್ಟದಲ್ಲಿವೆ” ಎಂದರು. ಅಲ್ಲದೇ, ಬ್ಯಾಂಕಿಂಗ್ ಅಧಿಕಾರಿಳೊಂದಿಗೆ ಸಂವಹನವನ್ನು ವೃದ್ಧಿಸುವ ಯೋಜನೆ ಕೇಂದ್ರಕ್ಕೆ ಇದೆ ಎಂದಿದ್ದಾರೆ.
ತಳ ಮಟ್ಟದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿ (ಎಂಎಸ್ಎಂಇ) ಗಳನ್ನು ತಲುಪಲು ಬ್ಯಾಂಕಿಂಗ್ ಅಧಿಕಾರಿಗಳ, ಸಚಿವಾಲಯದ ಅಧಿಕಾರಿಗಳ ನಡುವಣ ಸಂವಾದವನ್ನು ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಅವರು ಹೇಳಿದರು.
ಸಾಲಗಳನ್ನು ಮಂಜೂರು ಮಾಡುವ ವಿಷಯದ ಕುರಿತು ಮಾತನಾಡಿದ ಅವರು, “ಬ್ಯಾಂಕುಗಳು ಎಂಎಸ್ಎಂಇಗಳಿಗೆ ಯಾವುದೇ ಕಾರಣವಿಲ್ಲದೆ ಸಾಲವನ್ನು ನೀಡಲು ನಿರಾಕರಿಸಿದರೆ, ಯಾರು ಬೇಕಾದರು ವಿಶೇಷ ಕೇಂದ್ರಕ್ಕೆ ತಮ್ಮ ದೂರುಗಳನ್ನು ಮೇಲ್ ಮೂಲಕ ಕಳುಹಿಸಿಕೊಡಬಹುದು ಮತ್ತು ಅದರ ನಕಲು ಪ್ರತಿಯನ್ನು ಬ್ಯಾಂಕ್ ವ್ಯವಸ್ಥಾಪಕರಿಗೆ ಕಳುಹಿಸಿಕೊಡಬೇಕು” ಎಂದಿದ್ದಾರೆ.
ಭಾರತವು ಶೇಕಡಾ 8 ರ ಬೆಳವಣಿಗೆಗೆ ಮರಳುತ್ತದೆ ಮತ್ತು ಸರ್ಕಾರವು ಗುರಿಗಳನ್ನು ಸಾಧಿಸಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.