ನವದೆಹಲಿ: ಕೆಲವು ಜನರಿಗೆ ‘ಹಿಂದೂ’ ಎಂಬ ಪದದಿಂದ ಸಮಸ್ಯೆ ಇದೆ ಎಂದು ತೋರುತ್ತದೆ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಜನವರಿ 12 ರಂದು ಚೆನ್ನೈನಲ್ಲಿರುವ ಶ್ರೀ ರಾಮಕೃಷ್ಣ ಮಠದ ‘ಶ್ರೀ ರಾಮಕೃಷ್ಣ ವಿಜಯಂ’ ತಮಿಳು ಮಾಸಿಕದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಹಿಂದೂ ಎಂಬ ಪದದ ಬಗ್ಗೆ ಸ್ವಲ್ಪ ಅಲರ್ಜಿ ಹೊಂದಿರುವ ಕೆಲವರು ಈ ದೇಶದಲ್ಲಿದ್ದಾರೆ. ನಾವು ಅವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ ಮತ್ತು ಆ ರೀತಿಯ ದೃಷ್ಟಿಕೋನವನ್ನು ಹೊಂದಲು ಅವರಿಗೆ ಎಲ್ಲಾ ಹಕ್ಕಿದೆ. ಆದರೆ ಅದು ಸರಿಯಾದುದಲ್ಲ ”ಎಂದಿದ್ದಾರೆ.
“ಎಲ್ಲಾ ಭಾರತೀಯರಿಗೆ ಗೌರವವನ್ನು ನೀಡುವುದು ಭಾರತೀಯ ರಕ್ತದಲ್ಲಿ ಅಂತರ್ಗತವಾಗಿದೆ” ಎಂದು ಉಪ ರಾಷ್ಟ್ರಪತಿ ಹೇಳಿದ್ದಾರೆ.
“ಇಂದು ಎಂದಿಗಿಂತಲೂ ಹೆಚ್ಚಾಗಿ, ಜನರಲ್ಲಿ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವ ಗೋಡೆಗಳನ್ನು ಉರುಳಿಸುವ ಅವಶ್ಯಕತೆಯಿದೆ. ನಾವು ಸರ್ವ ಧರ್ಮ ಸಮಾ ಭಾವವನ್ನು ಅನುಸರಿಸುತ್ತೇವೆ – ಅದು ನಮ್ಮ ಭಾರತೀಯ ರಕ್ತದಲ್ಲಿಯೇ ಇದೆ ಮತ್ತು ಅದು ನಮ್ಮ ನಾಗರಿಕತೆಯ ಭಾಗವಾಗಿದೆ” ಎಂದು ಅವರು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ ಬೋಧನೆಗಳ ಕುರಿತು ಮಾತನಾಡಿದ ಅವರು, “ಹಿಂದೂ ಧರ್ಮವನ್ನು ಪಶ್ಚಿಮಕ್ಕೆ ಹರಡಿಸುವಲ್ಲಿ ವಿವೇಕಾನಂದರ ಪಾತ್ರ ದೊಡ್ಡದಿದೆ. ಅವರು ಸಾಮಾಜಿಕ ಸುಧಾರಕರಾಗಿದ್ದರು ಮತ್ತು ಧಾರ್ಮಿಕ ಮೂಢತೆಗಳಿಗೆ ವಿರುದ್ಧರಾಗಿದ್ದರು ಮತ್ತು ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಮಾನವೀಯತೆಯ ಉನ್ನತಿಯನ್ನು ನಂಬಿದ್ದರು ಮತ್ತು ಮಾನವಕುಲದ ಉಳಿವಿಗಾಗಿ ಆಧ್ಯಾತ್ಮಿಕತೆ ಮುಖ್ಯವಾಗಿದೆ ಎಂದು ಒತ್ತಿ ಹೇಳಿದರು” ಎಂದಿದ್ದಾರೆ.
“ಸ್ವಾಮಿ ವಿವೇಕಾನಂದರು ತಮ್ಮ ಧರ್ಮಕ್ಕೆ ಸೇರಿದವರಾಗಿರುವುದಕ್ಕೆ ಹೆಮ್ಮೆಪಡುತಿದ್ದರು. ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ, ಎಲ್ಲಾ ಧರ್ಮಗಳು ನಿಜವೆಂದು ಹೇಳುವ ಏಕೈಕ ಧರ್ಮ ಹಿಂದೂ ಧರ್ಮ. ಅದು ಶ್ರೇಷ್ಠತೆ, ಅದು ಧರ್ಮದ ಸೌಂದರ್ಯ. ನಮ್ಮ ರಾಷ್ಟ್ರವು ಯಾವಾಗಲೂ ಕಿರುಕುಳಕ್ಕೊಳಗಾದವರಿಗೆ ಮತ್ತು ಭೂಮಿಯ ಎಲ್ಲಾ ರಾಷ್ಟ್ರಗಳ ನಿರಾಶ್ರಿತರಿಗೆ ಆಶ್ರಯ ನೀಡಿದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.