ಡೆಹ್ರಾಡೂನ್ : ಈ ವರ್ಷ ಭಾರೀ ಪ್ರಮಾಣದ ಯಾತ್ರಿಕರು ಚಾರ್ಧಾಮ್ ಯಾತ್ರೆಯನ್ನು ಕೈಗೊಂಡು ದಾಖಲೆ ಬರೆದಿದ್ದಾರೆ. ಈ ವರ್ಷ ಇಲ್ಲಿಯವರೆಗೆ 27.35 ಲಕ್ಷ ಯಾತ್ರಾರ್ಥಿಗಳು ಚಾರ್ಧಾಮ್ ಯಾತ್ರೆ ನಡೆಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಪರಿಶೀಲನಾ ಸಭೆಯಲ್ಲಿ ತಿಳಿಸಲಾಗಿದೆ.
ಅಲ್ಲದೇ, 13 ಜಿಲ್ಲೆಗಳ 13 ತಾಣಗಳನ್ನು ಹೊಸ ಪ್ರವಾಸಿ ತಾಣಗಳಾಗಿ ಪರಿವರ್ತಿಸಲು ಶೀಘ್ರದಲ್ಲೇ ಮಾಸ್ಟರ್ ಪ್ಲ್ಯಾನ್ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮೊದಲ ಹಂತಕ್ಕಾಗಿ 50 ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗಿದೆ. ಮೇ 10 ರಂದು ಚಾರ್ಧಾಮ್ ಯಾತ್ರೆ ತನ್ನ ಪೋರ್ಟಲ್ಗಳನ್ನು ಯಾತ್ರಿಗಳಿಗಾಗಿ ಅನಾವರಣಗೊಳಿಸಿತ್ತು.
ಉತ್ತರಾಖಂಡದಲ್ಲಿ ಚಾರ್ಧಾಮ್ ದೇಗುಲ ನಿರ್ವಹಣಾ ಮಂಡಳಿಯ ರಚನೆಗೆ ಸಿದ್ಧತೆಗಳು ತೀವ್ರಗೊಂಡಿವೆ. ಪ್ರಸ್ತುತ, ಉತ್ತರಾಖಂಡದಲ್ಲಿ ಬದ್ರಿನಾಥ್, ಕೇದಾರನಾಥ್ ಮತ್ತು ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯದ ಪ್ರಯಾಣದ ವ್ಯವಸ್ಥೆಯನ್ನು ನಿರ್ವಹಿಸುವ ದೇವಾಲಯ ಮಂಡಳಿಗಳು ಇಲ್ಲ. ಉತ್ತಮ ಪ್ರಯಾಣ ವ್ಯವಸ್ಥೆಗಾಗಿ ದೇಗುಲ ಮಂಡಳಿಯನ್ನು ಸ್ಥಾಪಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಕಾಯಿದೆ ತರಲು ಪ್ರಸ್ತಾಪ ಮಾಡಲು ನಿರ್ಧರಿಸಲಾಗಿದೆ.
ಈ ಕುರಿತು ಸಂಸ್ಕೃತಿ ಇಲಾಖೆ ಕೆಲವು ದಿನಗಳ ಹಿಂದೆ ಮುಖ್ಯ ಕಾರ್ಯದರ್ಶಿಯ ಮುಂದೆ ನಿರೂಪಣೆಯನ್ನು ಇಟ್ಟಿದೆ. 1935 ರಲ್ಲಿ ತಂದಿರುವ ಬದ್ರಿ ಕೇದಾರ್ ಮಂದಿರ ಸಮಿತಿ ಕಾಯ್ದೆ ಬಹಳ ಹಳೆಯದಾಗಿದ್ದರಿಂದ, ಈ ಸನ್ನಿವೇಶಗಳಲ್ಲಿ ಸರ್ಕಾರ ಇದನ್ನು ಸೂಕ್ತವೆಂದು ಪರಿಗಣಿಸುತ್ತಿಲ್ಲ. ಬದ್ರಿನಾಥ್ ಮತ್ತು ಕೇದಾರನಾಥವಲ್ಲದೇ, ಇತರ 36 ದೇವಾಲಯಗಳನ್ನು ಈ ಕಾಯ್ದೆಯಡಿ ನಿರ್ವಹಿಸಲಾಗುತ್ತಿದೆ. ಆದರೆ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಇದು ಒಳಗೊಂಡಿಲ್ಲ. ಈ ಎಲ್ಲ ಸನ್ನಿವೇಶಗಳು ಹೊಸ ಕಾಯಿದೆಯನ್ನು ರಚಿಸುವ ಮೂಲಕ ಚಾರ್ ಧಾಮ್ ದೇಗುಲ ನಿರ್ವಹಣಾ ಮಂಡಳಿಯ ರಚನೆಗೆ ಕಾರಣವಾಗುತ್ತಿದೆ.
2018 ರಲ್ಲಿ 28 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಚಾರ್ ಧಾಮ್ಗೆ ಭೇಟಿ ನೀಡಿದ್ದಾರೆ. ದೇವಾಲಯ ಸಮಿತಿಯು ಬದ್ರಿನಾಥ್ ಮತ್ತು ಕೇದಾರನಾಥ ದೇವಾಲಯಗಳ ಪ್ರಯಾಣದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ, ಆದರೆ ಗಂಗೋತ್ರಿ ಮತ್ತು ಯಮುನೋತ್ರಿ ಭೇಟಿಗಳ ಮೇಲೆ ಅದಕ್ಕೆ ಯಾವುದೇ ನಿಯಂತ್ರಣವಿಲ್ಲ. ಗಂಗೋತ್ರಿ ಮತ್ತು ಯಮುನೋತ್ರಿ ಪ್ರಯಾಣದ ವ್ಯವಸ್ಥೆಗಳನ್ನು ಅಲ್ಲಿನ ವಿವಿಧ ಸಮಿತಿಗಳನ್ನು ನೋಡುತ್ತವೆ. ಈ ಕಾರಣದಿಂದಾಗಿ, ಪ್ರಯಾಣ ವ್ಯವಸ್ಥೆಯಲ್ಲಿ ಯಾವಾಗಲೂ ಸಮನ್ವಯದ ಕೊರತೆ ಎದ್ದು ಕಾಣುತ್ತದೆ. ಈ ಹಿನ್ನಲೆಯಲ್ಲಿ ಚಾರ್ಧಾಮ್ ದೇಗುಲ ನಿರ್ವಹಣಾ ಮಂಡಳಿಯನ್ನು ರಚನೆ ಮಾಡುವುದು ಹೆಚ್ಚು ಅಗತ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.