ಮಧುಬನಿ: ಈ ಲೋಕಸಭಾ ಚುನಾವಣೆಯು ಬಲಿಷ್ಠ ನಾಯಕತ್ವ ಮತ್ತು ದುರ್ಬಲ ನಾಯಕತ್ವದ ನಡುವಣ ಆಯ್ಕೆಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬಿಹಾರದ ಮಧುಬನಿಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ”ಈ ಬಾರಿ ಲೋಕಸಭಾ ಚುನಾವಣೆಯು, ಭಯೋತ್ಪಾದಕರ ಮುಂದೆ ಮಂಡಿಯೂರುವಂತಹ ದುರ್ಬಲ ನಾಯಕತ್ವ ಮತ್ತು ನರೇಂದ್ರ ಮೋದಿಯವರಂತಹ ದಿಟ್ಟ ನಾಯಕತ್ವ ಇವೆರಡರ ನಡುವಣ ಆಯ್ಕೆಯಾಗಿದೆ” ಎಂದಿದ್ದಾರೆ.
”ಮತದಾನ ಮಾಡುವುದಕ್ಕೂ ಮುನ್ನ ನಿಮಗೆ ಎಂತಹ ನಾಯಕತ್ವ ಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ. ಭಯೋತ್ಪಾದಕರು ಮತ್ತು ಅವರ ಮಾಸ್ಟರ್ ಮೈಂಡ್ಗಳ ಮುಂದೆ ವೋಟ್ ಬ್ಯಾಂಕ್ ಉಳಿಸಿಕೊಳ್ಳುವುದಕ್ಕಾಗಿ ಮಂಡಿಯೂರುವಂತಹ ನಾಯಕತ್ವ ಬೇಕೇ ಅಥವಾ ಭಯೋತ್ಪಾದಕರಿಗೆ ದಿಟ್ಟ ಉತ್ತರವನ್ನು ನೀಡುವ ಮೋದಿಯಂತಹ ದೃಢ ನಾಯಕತ್ವ ಬೇಕೇ ಎಂಬುದನ್ನು ನಿರ್ಧಾರ ಮಾಡಿಕೊಳ್ಳಿ” ಎಂದು ಜನರಿಗೆ ಅವರು ಮನವಿ ಮಾಡಿಕೊಂಡಿದ್ದಾರೆ.
”ಪಾಕಿಸ್ಥಾನ ಭಾರತದ ವಿರುದ್ಧ ಮೂರು ಯುದ್ಧಗಳನ್ನು ಸೋತಿದೆ. ಈ ಸೋಲಿನಿಂದ ಭ್ರಮನಿರಸನಗೊಂಡು ಅದು ಭಯೋತ್ಪಾದಕರನ್ನು ಛೂ ಬಿಡುತ್ತಿದೆ. ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದೆ. ಶ್ರೀಲಂಕಾದಲ್ಲಿ ಏನಾಗಿದೆ ಎಂಬುದನ್ನು ನಾವೀಗ ನೋಡುತ್ತಿದ್ದೇವೆ. ಭಯೋತ್ಪಾದನೆ ಬಗ್ಗೆ ಎನ್ಡಿಎ ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ” ಎಂದಿದ್ದಾರೆ.
‘ಎನ್ಡಿಎಯು ಎಲ್ಲರನ್ನೂ ಒಳಗೊಂಡ ಭಾರತೀಯ ಪರಂಪರೆಯನ್ನು ಮತ್ತು ಪ್ರಗತಿಯನ್ನು ಗೌರವಿಸುತ್ತದೆ, ನೆರೆಯ ಸಣ್ಣಪುಟ್ಟ ದೇಶಗಳ ಗಡಿ ಭಾಗವನ್ನು ಆಕ್ರಮಿಸುವ ಬುದ್ಧಿ ನಮಗಿಲ್ಲ, ಆದರೆ ನಮ್ಮ ಭೂಮಿಯನ್ನು ಆಕ್ರಮಿಸಲು ಬಂದವರನ್ನು ನಾವು ಬಿಡುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.