ನವದೆಹಲಿ: ರಬ್ಬರ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ (RSDC), ಸಮರ್ಥ್ ಯೋಜನೆಯನ್ನು ಆರಂಭಿಸಿದೆ. 2020ರ ವೇಳೆಗೆ ರಬ್ಬರ್ ವಲಯದಲ್ಲಿರುವ ಸುಮಾರು 10 ಲಕ್ಷ ಸಿಬ್ಬಂದಿಗಳನ್ನು ಕೌಶಲ್ಯ ಭರಿತರನ್ನಾಗಿಸುವ, ಅವರಿಗೆ ಹೆಚ್ಚಿನ ತರಬೇತಿಯನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
‘ರಬ್ಬರ್ ಬೆಳೆಗಾರರನ್ನು ಕೌಶಲ್ಯಭರಿತರನ್ನಾಗಿಸುವ ಸಲುವಾಗಿ RSDCಯು, ರಬ್ಬರ್ ಬೋರ್ಡ್ ನೊಂದಿಗೆ ಕೈಜೋಡಿಸಿದೆ. ಎನ್ ಆರ್ ಪ್ಲಾಂಟೇಶನ್ ಗಳಲ್ಲಿ ಕೌಶಲ್ಯ ತರಬೇತಿಯ ಮೇಲ್ವಿಚಾರಣೆ ನಡೆಸುವ ತಜ್ಞತೆಯನ್ನು ರಬ್ಬರ್ ಬೋರ್ಡ್ ಹೊಂದಿದೆ’ ಎಂಬುದಾಗಿ RSDC ಮುಖ್ಯಸ್ಥ ವಿನೋದ್ ಸಿಮೊನ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನಾದಡಿಯಲ್ಲಿನ ರಿಕಾಗ್ನಿಶನ್ ಆಫ್ ಪ್ರಿಯರ್ ಲರ್ನಿಂಗ್ ಕಾರ್ಯಕ್ರಮದಡಿಯಲ್ಲಿ ‘ಸಮರ್ಥ್’ ಯೋಜನೆಯನ್ನು ತರಲಾಗಿದ್ದು, ಇದರಡಿ ರಬ್ಬರ್ ಬೆಳೆಗಾರರಿಗೆ ತರಬೇತಿಯನ್ನು ನೀಡಲಾಗುತ್ತದೆ, ರಬ್ಬರ್ ಗಿಡ ನೆಡುವಿಕೆ, ಟೈರ್ ಸರ್ವಿಸ್ ಮತ್ತು ರಬ್ಬರ್ ಉತ್ಪಾದನೆಯನ್ನು ಹೇಳಿಕೊಡಲಾಗುತ್ತದೆ.
ರಬ್ಬರ್ ನರ್ಸರಿಯಲ್ಲಿನ ಸಾಮಾನ್ಯ ಕೂಲಿಕಾರ್ಮಿಕನಾಗಲು ತರಬೇತಿ, ರಬ್ಬರ್ ಸಂಸ್ಕರಣಾ ತಂತ್ರಗಾರಿಕೆ ತರಬೇತಿ, ರಬ್ಬರ್ ಶೀಟಿಂಗ್ ತರಬೇತಿ, ರಬ್ಬರ್ ತೋಟದಲ್ಲಿ ಸಾಮಾನ್ಯ ಕಾರ್ಮಿಕರನ್ನು ಕೌಶಲ್ಯಭರಿತರನ್ನಾಗಿಸುವ ತರಬೇತಿಯನ್ನು ನೀಡಲಾಗುತ್ತದೆ.
ಭಾರತವು ನೈಸರ್ಗಿಕ ರಬ್ಬರ್ ಉತ್ಪಾದನೆಯಲ್ಲಿ ವಿಶ್ವದ 5ನೇ ಅತೀದೊಡ್ಡ ರಾಷ್ಟ್ರವಾಗಿದೆ, ವಿಶ್ವದ 4ನೇ ಅತೀದೊಡ್ಡ ನೈಸರ್ಗಿಕ ರಬ್ಬರ್ ಗ್ರಾಹಕನಾಗಿದೆ. ಜಾಗತಿಕವಾಗಿ ಅತೀಹೆಚ್ಚು ರಬ್ಬರ್ ಕೃಷಿ ಭೂಪ್ರದೇಶವನ್ನು ಹೊಂದಿರುವ 6ನೇ ರಾಷ್ಟ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.