ನವದೆಹಲಿ: ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಗುರುವಾರ ಪರಮ್ ವಿಶಿಷ್ಟ್ ಸೇವಾ ಮೆಡಲ್ (ಪಿವಿಎಸ್ಎಂ) ಪುರಸ್ಕಾರದಿಂದ ಸನ್ಮಾನಿತರಾಗಿದ್ದಾರೆ. ಇದು ಶಾಂತಿ ಸಂದರ್ಭದಲ್ಲಿನ ಸೇವೆಗಾಗಿ ರಾಷ್ಟ್ರಪತಿಗಳು ನೀಡುವ ಅತ್ಯುನ್ನತ ಮಿಲಿಟರಿ ಅವಾರ್ಡ್ ಆಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಮೆಡಲ್ನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾವತ್ ಅವರಿಗೆ ಪ್ರದಾನಿಸಿದ್ದಾರೆ.
20 ಜಾಟ್ ರಿಜಿಮೆಂಟ್ನ ಮೇಜರ್ ತುಷಾರ್ ಗುಬಾ ಅವರಿಗೆ ಕೀರ್ತಿ ಚಕ್ರ ದೊರೆತಿದೆ. ಕಳೆದ ವರ್ಷ ಮೇ 24ರಂದು ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂರು ಉಗ್ರವಾದಿಗಳನ್ನು ಹತ್ಯೆ ಮಾಡಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ದೊರೆತಿದೆ.
ಇದೇ ವೇಳೆ ಸೇನೆ ಮತ್ತು ಸಿಆರ್ಪಿಎಫ್ನ 12 ಅಧಿಕಾರಿಗಳು ಮತ್ತು ಯೋಧರಿಗೆ ಶೌರ್ಯ ಚಕ್ರವನ್ನು ನೀಡಲಾಯಿತು. ಸೇನಾ ಸಿಪಾಯಿ ವ್ರಮ್ಹ ಪಾಲ್ ಸಿಂಗ್ ಮತ್ತು ಸಿಆರ್ಪಿಎಫ್ ಯೋಧ ರಾಜೇಂದ್ರ ನೈನ್ ಮತ್ತು ರವೀಂದ್ರ ಬಬ್ಬನ್ ಧನ್ವಾಡೆಗೆ ಮರಣೋತ್ತರವಾಗಿ ಕೀರ್ತಿ ಚಕ್ರ ದೊರೆತಿದೆ.
14 ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್ನ ಮೇಜರ್ ಅಮಿತ್ ಕುಮಾರ್ ದಿಮ್ರಿ, 4 ಗೋರ್ಖಾ ರೈಫಲ್ಸ್ ರೆಜಿಮೆಂಟ್ನ ಮೇಜರ್ ಇಮ್ಲಿಯಕುಂ ಕೀತ್ಝರ್, ಮೇಜರ್ 9 ಪ್ಯಾರಾದ ರೋಹಿತ್ ಲಿಂಗಾವತ್, 21 ರಾಷ್ಟ್ರೀಯ ರೈಫಲ್ಸ್ನ ಕ್ಯಾಪ್ಟನ್ ಅಭಿನವ್ ಕುಮಾರ್ ಚೌಧುರಿ, 10 ಪ್ಯಾರಾದ ಲೆ. ಕರ್ನಲ್ ವಿಕ್ರಾಂತ್ ಪ್ರಶೆರ್, 9 ರಾಷ್ಟ್ರೀಯ ರೈಫಲ್ಸ್ನ ಲ್ಯಾನ್ಸ್ ನಾಯ್ಕ್ ಆಯೂಬ್ ಅಲಿ, 42 ರಾಷ್ಟ್ರೀಯ ರೈಫಲ್ಸ್ನ ಸಿಪಾಯಿ ಅಜಯ್ ಕುಮಾರ್, 44 ಆರ್ಆರ್ನ ಸಪ್ಪರ್ ಮಹೇಶನ್ ಎಚ್ಎನ್ ಅವರಿಗೂ ಪ್ರಶಸ್ತಿಗಳನ್ನು ಪ್ರದಾನಿಸಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪ್ರಶಸ್ತಿ ಭವನದಲ್ಲಿ ಉಪಸ್ಥಿತರಿದ್ದರು.
Delhi: Army Chief General Bipin Rawat conferred with Param Vishisht Seva Medal by President Ram Nath Kovind, at Rashtrapati Bhawan, today. pic.twitter.com/B8IjVh1eXw
— ANI (@ANI) March 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.