ನವದೆಹಲಿ: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸವಾಲು ಹಾಕಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಒಂದು ವೇಳೆ ಖಾನ್ ಶಾಂತಿಯನ್ನು ಬಯಸುವುದೇ ಆದರೆ ಮೊದಲು ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ನನ್ನು ಭಾರತಕ್ಕೆ ಒಪ್ಪಿಸಬೇಕು ಎಂದಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಇಮ್ರಾನ್ ಖಾನ್ ಮೇಧಾವಿ ರಾಜಕಾರಣಿಯೇ ಆಗಿದ್ದರೆ, ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುವವರೇ ಆಗಿದ್ದರೆ ಅವರು ಅಝರ್ನನ್ನು ಭಾರತಕ್ಕೆ ಒಪ್ಪಿಸಬೇಕು ಎಂದಿದ್ದಾರೆ.
‘ಇಮ್ರಾನ್ ಖಾನ್ ಭಾರೀ ವಿಧೇಯತೆ ತೋರಿಸುತ್ತಿದ್ದಾರೆ. ಶಾಂತಿ ಮಾತುಕತೆಯನ್ನು ಬಯಸುತ್ತಿದ್ದಾರೆ. ಒಂದು ವೇಳೆ ಇಮ್ರಾನ್ ಶ್ರೇಷ್ಠನೇ ಆಗಿದ್ದರೆ ಅಝರ್ನನ್ನು ಯಾಕೆ ಹಸ್ತಾಂತರ ಮಾಡುತ್ತಿಲ್ಲ? ಅವರ ಹೃದಯ ವೈಶಾಲ್ಯತೆಯನ್ನು ನೋಡೋಣ. ಅಝರ್ನನ್ನು ನಮಗೊಪ್ಪಿಸಲಿ’ ಎಂದಿದ್ದಾರೆ.
ಇನ್ನೊಂದೆಡೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಸೂದ್ ಅಝರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಫ್ರಾನ್ಸ್, ಅಮೆರಿಕಾ ಮತ್ತು ಯುಕೆಯ ಪ್ರಯತ್ನವನ್ನು ಚೀನಾ ನಾಲ್ಕನೇಯ ಬಾರಿಗೆ ತಡೆದಿದೆ. ಈ ಪ್ರಸ್ತಾವಣೆಯಲ್ಲಿ ತಾಂತ್ರಿಕ ದೋಷವಿದೆ ಎಂಬುದು ಚೀನಾದ ವಾದವಾಗಿದೆ.
ಚೀನಾದ ಈ ಧೋರಣೆ ನಮಗೆ ಅಸಮಾಧಾನವನ್ನು ತಂದಿದೆ ಎಂದು ಭಾರತ ಹೇಳಿದೆ, 10 ದೇಶಗಳು ಈ ಪ್ರಸ್ತಾವನೆಯನ್ನು ಬೆಂಬಲಿಸಿದ್ದವು. ಆದರೆ ಚೀನಾ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಪಾಕಿಸ್ಥಾನದ ಭಯೋತ್ಪಾದನೆಗೆ ಪರೋಕ್ಷವಾಗಿ ಬೆಂಬಲವನ್ನು ನೀಡಿದೆ.
ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ತಾನೇ ಕಾರಣ ಎಂದು ಜೈಶೇ ಮೊಹಮ್ಮದ್ ಸಂಘಟನೆ ಬಹಿರಂಗವಾಗಿಯೇ ಒಪ್ಪಿಕೊಂಡಿದೆ. ಆದರೂ ಅದರ ಮುಖ್ಯಸ್ಥನನ್ನು ಚೀನಾ ರಕ್ಷಣೆ ಮಾಡುತ್ತಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.