ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಮತ್ತು ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ಜೀವನಚರಿತ್ರೆ ಮೆಗಾ ವೆಬ್ ಸೀರೀಸ್ ಆಗಿ ನಮ್ಮ ಮುಂದೆ ಬರಲು ಸಜ್ಜಾಗಿದೆ. ಈ ವೆಬ್ಸರಣಿ ಅಂತಾರಾಷ್ಟ್ರೀಯ ಖ್ಯಾತಿಯ ಬರಹಗಾರ ಹಿಂದೋಲ್ ಸೇನ್ಗುಪ್ತಾ ಅವರ ಪುಸ್ತಕ ‘ದಿ ಮ್ಯಾನ್ ಹು ಸೇವ್ಡ್ ಇಂಡಿಯಾ’ ಪುಸ್ತಕವನ್ನು ಆಧರಿಸಿರಲಿದೆ.
ಗ್ಯಾಂಗ್ಸ್ ಆಫ್ ವಸ್ಸೇಪುರ್ ಮತ್ತು ತನು ವೆಡ್ಸ್ ಮನು ಸಿನಿಮಾದ ನಿರ್ಮಾಪಕರಾದ ಸುನೀಲ್ ಬೋಹ್ರಾ ಮತ್ತು ಶೈಲೇಶ್ ಆರ್ ಸಿಂಗ್ ಅವರು ಭಾರತದ ಅತೀ ದೊಡ್ಡ ಇಂಗ್ಲೀಷ್ ಭಾಷೆಯ ಟ್ರೇಡ್ ಪಬ್ಲಿಷರ್ ’ಪೆಂಗ್ವೀನ್ ರ್ಯಾಂಡನ್ ಹೌಸ್ ಇಂಡಿಯಾ’ದೊಂದಿಗೆ ಕೈಜೋಡಿಸಿ ವೆಬ್ಸರಣಿ ಮೂಲಕ ಲೋಹ ಪುರುಷನ ಜೀವನ ಚರಿತ್ರೆಯನ್ನು ಜನರ ಮುಂದಿಡಲಿದ್ದಾರೆ.
’ಸರ್ದಾರ್ ವಲ್ಲಭಾಭಾಯ್ ಅವರು ಹೇಗೆ ಭಾರತದ ರಾಜಕೀಯ ಅತ್ಯಂತ ಪ್ರಮುಖ ವ್ಯಕ್ತಿತ್ವವಾಗಿ ಹೊರಹೊಮ್ಮಿದರು ಎಂಬುದನ್ನು ಈ ವೆಬ್ ಸಿರೀಸ್ ತೋರಿಸಿಕೊಡಲಿದೆ’ ಎಂದು ಬೋಹ್ರಾ ಹೇಳಿದ್ದಾರೆ.
‘ಸಾಧಾರಣ ಮಟ್ಟದ ಶಿಕ್ಷಣದೊಂದಿಗೆ ಸಾಮಾನ್ಯ ಮಟ್ಟದ ಹುಡುಗನಾಗಿ ಗುಜರಾತಿನಿಂದ ಹೊರಟ ವಲ್ಲಭಾಭಾಯ್ ಜಾವೆರ್ಭಾಯ್ ಅವರು ಬಳಿಕ ಅತೀ ಕಠಿಣ ಬ್ರಿಟಿಷ್ ಕಾನೂನು ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬ್ರಿಟನ್ನಿಂದ ಭಾರತಕ್ಕೆ ಬಂದ ಬಳಿಕ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿ ಗಾಂಧೀಜಿ ಸಲಹೆಯಂತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಅಲ್ಲಿಂದ ಪಟೇಲ್ ಅವರು ಸ್ವತಃ ರಾಷ್ಟ್ರಪಿತನಿಂದಲೇ ’ಸರ್ದಾರ್’ ಎಂದು ಕರೆಸಿಕೊಂಡರು’ ಎಂದು ಬೋಹ್ರಾ ಹೇಳಿದ್ದಾರೆ.
’ಸರ್ದಾರ್ ಅವರ ವಿಶಾಲ ಜೀವನದ ಹಲವಾರು ಕಥೆಗಳಲ್ಲಿ ಇದು ಕೂಡ ಒಂದು. ದೃಶ್ಯ ಚಿತ್ತಾರದೊಂದಿಗೆ ಈ ಕಥೆ ಹೇಳುವ ಸಾಮರ್ಥ್ಯವಿರುವ ವ್ಯಕ್ತಿ ಸುನೀಲ್ ಆಗಿದ್ದಾರೆ. ಮಹಾತ್ಮಾ ಗಾಂಧಿ ಅವರ ಕಥೆಯಂತೆಯೇ ಸರ್ದಾರ್ ಅವರ ಕಥೆ ಕೂಡ ನವ ಪೀಳಿಗೆಯ ಜನರಿಗೆ ಹೆಚ್ಚು ಪೂರಕವಾದ ರೀತಿಯಲ್ಲಿ ನಿರ್ಮಾಣವಾಗಲಿದೆ’ ಎಂದು ಹಿಂದೋಲ್ ಸೇನಗುಪ್ತ ಹೇಳಿದ್ದಾರೆ.
Pleased to announce that #TheManWhoSavedIndia my biography of #SardarVallabhbhaiPatel will be made into a motion picture by some of India’s most exciting filmmakers. Coming to a screen near you soon. https://t.co/HqKBuJIPwj
— HindolSengupta (@HindolSengupta) March 11, 2019
ಸರ್ದಾರ್ ಪಟೇಲರು ದೇಶ ಗೃಹ ಸಚಿವರಾಗಿ, ಉಪ ಪ್ರಧಾನಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. 1950ರಲ್ಲಿ ಇವರು ನಿಧನರಾದರು. ಈ ಹಿಂದೆ ‘ಸರ್ದಾರ್’ ಎಂಬ ಇವರ ಜೀವನಚರಿತ್ರೆಯ ಸಿನಿಮಾ ಬಂದಿತ್ತು, ಇದರಲ್ಲಿ ಪರೇಶ್ ರಾವಲ್ ನಟಿಸಿದ್ದರು.
2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ಅವರಿಗೆ ಅರ್ಪಿತಗೊಂಡ ವಿಶ್ವದ ಅತೀದೊಡ್ಡ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಇದು 143ನೇ ಜನ್ಮದಿನಕ್ಕೆ ಪಟೇಲ್ ಅವರಿಗೆ ನೀಡಲಾದ ಅತೀ ದೊಡ್ಡ ಗೌರವವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.