ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ನಲ್ಲಿ ಭಾನುವಾರ ಸಂಜೆಯಿಂದ ಭಾರತೀಯ ಸೇನೆ, ಸಿಆರ್ಪಿಎಫ್, ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂರು ಮಂದಿ ಉಗ್ರರು ಹತರಾಗಿದ್ದಾರೆ.
ಸೋಮವಾರ ಬೆಳಿಗ್ಗೆವರೆಗೂ ಪ್ರದೇಶದಲ್ಲಿ ಇತರ ಉಗ್ರರಿಗೆ ಶೋಧಕಾರ್ಯ ಮುಂದುವರೆದಿದೆ. ಮೂರು ಉಗ್ರರು ಹತ್ಯೆಯಾಗಿದ್ದಾರೆ ಎಂಬುದನ್ನು ಭಾರತೀಯ ಸೇನೆ ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದೆ.
ಫೆ.14ರಂದು ಪುಲ್ವಾಮದಲ್ಲಿ ಸಿಆರ್ಪಿಫ್ ಯೋಧರ ಮೇಲೆ ನಡೆದ ಹೇಯ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಮುದಾಸಿರ್ ಎಂಬಾತ ಸತ್ತ ಮೂರು ಉಗ್ರರ ಪೈಕಿ ಒರ್ವ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಮೂರು ಉಗ್ರರು ಜೈಶೇ ಇ ಮೊಹಮ್ಮದ್ ಸಂಘಟನೆಗೆ ಸೇರದವರು ಎಂಬುದು ತಿಳಿದು ಬಂದಿದೆ. ಆದರೆ ಹೆಸರು ಇನ್ನೂ ಪ್ರಕಟವಾಗಿಲ್ಲ.
ಉಗ್ರರ ಚಲನವಲನದ ಸ್ಪಷ್ಟ ಮಾಹಿತಿಯನ್ನು ಪಡೆದುಕೊಂಡು ಸೇನಾ ಪಡೆಗಳುಈ ಜಂಟಿ ಕಾರ್ಯಾಚರಣೆಯನ್ನು ತ್ರಾಲ್ ನಗರದಲ್ಲಿ ನಡೆಸಿವೆ.
ಶೋಧ ಕಾರ್ಯಾಚರಣೆಯ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ, ಇದಕ್ಕೆ ಪ್ರತ್ಯುತ್ತರವನ್ನು ಗುಂಡಿನ ಮೂಲಕವೇ ಯೋಧರು ನೀಡಿದ್ದಾರೆ. ಕೊನೆಗೆ ಎನ್ಕೌಂಟರ್ ಆರಂಭವಾಗಿ ಉಗ್ರರು ನೆಲಕ್ಕುರುಳಿದ್ದಾರೆ. ಅವರಿಂದ ಎಕೆ 47 ರೈಫಲ್ಸ್ ಸೇರಿದಂತೆ ಹಲವಾರು ಸ್ಪೋಟಕ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಎನ್ಕೌಂಟರ್ ನಡೆದ ಪ್ರದೇಶದಲ್ಲಿ ಓಡಾಡದಂತೆ, ಭದ್ರತಾ ಪಡೆಗಳಿಗೆ ಸಹಕಾರ ನೀಡುವಂತೆ ಪೊಲೀಸರು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.