ನವದೆಹಲಿ: ಅದ್ಭುತ ಮಾತುಗಾರ ಎನಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿ ಭಾಷಣವೂ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ. ಅವರ ಭಾಷಣ ಕೇಳಲೆಂದೇ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ. ಸಭಿಕರನ್ನು ಮೋಡಿ ಮಾಡುವ ತಾಕತ್ತು ಮೋದಿಯವರ ಭಾಷಣಕ್ಕಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಮೋದಿಯಂತಹ ಮತ್ತೊಬ್ಬ ಅದ್ಭುತ ಭಾಷಣಕಾರ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ.
ಇಂತಹ ಮೋದಿಯವರ ಆಯ್ದ ಭಾಷಣಗಳುಳ್ಳ ಪುಸ್ತಕ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಅನ್ನು ಶುಕ್ರವಾರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಜೇಟ್ಲಿ, ‘ಸಾಮಾನ್ಯ ರಾಜಕಾರಣಿಗಳು ಮರುದಿನ ಬೆಳಗ್ಗೆ ಹೆಡ್ಲೈನ್ನಲ್ಲಿ ಸ್ಥಾನ ಪಡೆಯಲು ಭಾಷಣಗಳನ್ನು ಮಾಡುತ್ತಾರೆ, ಆದರೆ ಮೇಧಾವಿ ರಾಜಕಾರಣಿಗಳ ಭಾಷಣಗಳು ಮುಂದಿನ ಪೀಳಿಗೆಗೂ ಪ್ರೇರಕವಾಗಿರುತ್ತದೆ. ಪ್ರಧಾನಿ ನರೇಂದ್ರ ಮೋದಿಯವ ಭಾಷಣ ನಮ್ಮ ದೇಶವನ್ನು ಪ್ರಭಾವಿತಗೊಳಿಸಿದ್ದು ಮಾತ್ರವಲ್ಲ, ವಿದೇಶವನ್ನೂ ಪ್ರಭಾವಿತಗೊಳಿಸಿದೆ’ ಎಂದರು.
ಡಾ.ಬಿ ಆರ್ ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಇಂದ್ರಜಿತ್ ಗುಪ್ತಾ ಮುಂತಾದ ನಾಯಕರು ಅದ್ಭುತವಾದ ಮಾತುಗಾರಿಕ ಕಲೆ ಮತ್ತು ಭಾಷಣ ಚಾಣಾಕ್ಷತೆಯನ್ನು ಹೊಂದಿದ್ದರು ಎಂಬುದನ್ನು ಜೇಟ್ಲಿ ನೆನಪಿಸಿಕೊಂಡಿದ್ದಾರೆ.
ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯವು ನವದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ನಲ್ಲಿ ಆಯೋಜನೆಗೊಳಿಸಿದ ಸಮಾರಂಭದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಈ ಪುಸ್ತಕ ಐದು ಸಂಪುಟಗಳನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.