ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ಅವರು ಶತ್ರು ನೆಲದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ಅವರ ಆಗಮನವನ್ನು ಸಮಸ್ತ ಭಾರತೀಯರು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಕೂಡ ಅಭಿನಂದನ್ ಅವರನ್ನು ಸ್ವಾಗತಿಸಿ ಟ್ವಿಟ್ ಮಾಡಿದ್ದು, ಟೀಮ್ ಇಂಡಿಯಾ ಜೆರ್ಸಿಯಲ್ಲಿ ‘ವಿಂಗ್ ಕಮಾಂಡರ್ ಅಭಿನಂದನ್’ ಎಂದು ಬರೆದುಕೊಂಡಿದೆ.
#ವೆಲ್ಕಂಹೋಮ್ಅಭಿನಂದನ್ ನೀವು ಆಗಸವನ್ನು ಆಳಿದರಿ, ನಮ್ಮ ಹೃದಯಯವನ್ನಾಳಿದಿರಿ. ನಿಮ್ಮ ಧೈರ್ಯ ಮತ್ತು ಘನತೆ ಮುಂಬರುವ ಪೀಳಿಗೆಗೂ ಪ್ರೇರಕವಾಗಲಿದೆ #ಟೀಮ್ಇಂಡಿಯಾ’ ಎಂದು ಬಿಸಿಸಿಐ ಟ್ವಿಟ್ ಮಾಡಿದೆ.
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರೂ ಟ್ವಿಟ್ ಮಾಡಿ, ’ಹೀರೋ ಎಂಬುದು ನಾಲ್ಕು ಅಕ್ಷರಗಳಿಗಿಚಿತ ಮಿಗಿಲಾದುದು, ತನ್ನ ಸಾಹಸ, ನಿಸ್ವಾರ್ಥತೆ, ಪರಿಶ್ರಮದ ಮೂಲಕ ನಮ್ಮ ಹೀರೋ ನಮಗೆ ನಮ್ಮ ಮೇಲೆ ನಂಬಿಕೆ ಇಡುವುದನ್ನು ಕಲಿಸಿದ’ ಎಂದಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರೂ ಟ್ವಿಟ್ ಮಾಡಿ, ‘ರಿಯಲ್ ಹೀರೋ, ನಿಮಗೆ ತಲೆಬಾಗುತ್ತೇನೆ. ಜೈ ಹಿಂದ್’ ಎಂದಿದ್ದಾರೆ.
ಪಾಕಿಸ್ಥಾನದ ಎಫ್-16 ವಿಮಾನವನ್ನು ಹೊಡೆದುರುಳಿಸುವ ವೇಳೆ ತಮ್ಮ ಮಿಗ್-21 ವಿಮಾನ ಪತನಗೊಂಡು ಪಾಕಿಸ್ಥಾನದ ನೆಲದೊಳಕ್ಕೆ ಪ್ಯಾರಾಚೂಟ್ ಮೂಲಕ ಹಾರಿ ಬಿದ್ದಿದ್ದರು. ಮೂರು ದಿನಗಳ ಕಾಲ ಪಾಕ್ನ ಬಂಧನದಲ್ಲಿದ್ದ ಅವರನ್ನು ಶುಕ್ರವಾರ ರಾತ್ರಿ ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.