ಇಂದೋರ್: ಇಂದೋರ್ ತನ್ನ ಕಸದ ತೊಟ್ಟಿಯಂತಿದ್ದ ಭೂಪ್ರದೇಶವನ್ನು ಸುಂದರ ಉದ್ಯಾನವನವನ್ನಾಗಿ ಪರಿವರ್ತಿಸಿದೆ. ತ್ಯಾಜ್ಯ ನಿರ್ವಹಣೆಯ ಸಮರ್ಪಕ ಯೋಜನೆಯ ಮೂಲಕ ಕಸದಿಂದ ಇಂಧನ ಹಾಗೂ ಗೊಬ್ಬರಗಳನ್ನು ಇಲ್ಲಿ ತಯಾರು ಮಾಡಲಾಗುತ್ತಿದೆ.
ನಗರ ಈಗ ಸಂಪೂರ್ಣ ಕಸ ಮುಕ್ತವಾಗಿದ್ದು, ಗಾರ್ಬೆಜ್ ಫ್ರೀ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಂತ್ರಜ್ಞಾನದ ಮೂಲಕ ಪರಿಸರ ಸ್ನೇಹಿ ಕಸ-ನಾಶ ವ್ಯವಸ್ಥೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸುವ ವ್ಯವಸ್ಥೆಗಳನ್ನು ಇಲ್ಲಿ ಅಳವಡಿಸಲಾಗಿದೆ.
ತ್ಯಾಜ್ಯಗಳನ್ನು ಹಸಿ ಮತ್ತು ಒಣ ಕಸಗಳಾಗಿ ವಿಂಗಡನೆ ಮಾಡುವ ಮೂಲಕ ಇದೆಲ್ಲಾ ಸಾಧ್ಯವಾಗುತ್ತಿದೆ ಎಂದು ಇಂದೋರ್ ಕಮಿಷನರ್ ಆಶಿಶ್ ಸಿಂಗ್ ಹೇಳಿದ್ದಾರೆ.
ಇಡೀ ನಗರದಿಂದ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ಮೊದಲು 10 ನೊಡಲ್ ಪಾಯಿಂಟ್ಗಳಿಗೆ ಒಯ್ಯಲಾಗುತ್ತದೆ, ಅಲ್ಲಿಂದ ಟ್ರೆಂಚಿಂಗ್ ಗ್ರೌಂಡ್ಗೆ ತೆಗೆದುಕೊಂಡು ಹೋಗಲಾಗುತ್ತದೆ. ಬಳಿಕ ಇಲ್ಲಿ ಒಣ ಕಸಗಳನ್ನು ಮತ್ತೆ ವಿಂಗಡಿಸುವ ಕಾರ್ಯ ನಡೆಯುತ್ತದೆ. ಒಣ ಮತ್ತು ಹಸಿ ಕಸಗಳಿಂದ ಗೊಬ್ಬರ, ಇಂಧನ, ಅನಿಲ ಇತ್ಯಾದಿ ವಿವಿಧ ವಸ್ತುಗಳನ್ನು ತಯಾರು ಮಾಡಲಾಗುತ್ತದೆ.
ಇದೆಲ್ಲವೂ ಇಂದೋರ್ ಮಹಾ ನಗರಪಾಲಿಕೆಯ ಕಾರ್ಯದಿಂದ ಸಾಧ್ಯವಾಗುತ್ತಿದ್ದು, ಅದರ ಪ್ರಯತ್ನದಿಂದಾಗಿ ಇಂದೋರ್ ಕಸಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.