ನವದೆಹಲಿ: ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಲೋಕಾರ್ಪಣೆಗೊಳಿಸಿದ ಏಷ್ಯಾದ ಎರಡನೇ ಅತೀದೊಡ್ಡ ರೈಲ್-ರೋಡ್ ಬ್ರಿಡ್ಜ್ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಭಾರತದ ಹೆಮ್ಮೆ ಎನಿಸಿಕೊಂಡಿದೆ. ಈ ಬ್ರಿಡ್ಜ್ ಚೀನಾದೊಂದಿಗಿನ ಗಡಿ ಭಾಗದಲ್ಲಿ ರಕ್ಷಣೆಗೆ ಹೆಚ್ಚಿನ ಉತ್ತೇಜವನ್ನು ಒದಗಿಸಲಿದೆ ಎಂದು ಅಭಿಪ್ರಾಯಿಸಲಾಗಿದೆ.
ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಈ ಬೋಗಿಬೀಲ್ ಬ್ರಿಡ್ಜ್, ಶಂಕುಸ್ಥಾಪನೆಗೊಂಡು ಎರಡು ದಶಕಗಳ ಬಳಿಕ ಉದ್ಘಾಟನೆಗೊಂಡಿದೆ, ರೂ.5,600 ಕೋಟಿ ವೆಚ್ಚದಲ್ಲಿ ಇದರ ನಿರ್ಮಾಣವಾಗಿದೆ.
ದಿಬ್ರಘರ್ ಸಮೀಪದಲ್ಲಿರುವ ಈ ಬ್ರಿಡ್ಜ್, ಪಕ್ಕದಲ್ಲೇ ಇರುವ ಅರುಣಾಚಲ ಪ್ರದೇಶದ ಮಿಲಿಟರಿ ನಿಯೋಜನೆ, ಹಿಂತೆಗೆದ ಇತ್ಯಾದಿ ಕಾರ್ಯಗಳನ್ನು ತ್ವರಿತಗೊಳಿಸಲಿದೆ. ಅಲ್ಲದೇ ದಿಬ್ರಘರ್ನಿಂದ ಅರುಣಾಚಲಪ್ರದೇಶದ ಪ್ರಯಾಣವನ್ನು 750 ಕಿ.ಮೀಯಷ್ಟು ಕಡಿತಗೊಳಿಸಲಿದೆ.
ಭಾರತದ ಅತೀ ಭಾರದ 60 ಟನ್ಗಳ ಬ್ಯಾಟಲ್ ಟ್ಯಾಂಕ್ನ ಭಾರವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಈ ಬ್ರಿಡ್ಜ್ಗೆ ಇದ್ದು ಮತ್ತು ಫೈಟರ್ ಜೆಟ್ಗಳು ಕೂಡ ಇಲ್ಲಿ ಲ್ಯಾಂಡ್ ಆಗಬಹುದಾಗಿದೆ.
ಒಂದರ್ಥದಲ್ಲಿ ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಅರುಣಾಚಲಪ್ರದೇಶದಲ್ಲಿ ರಕ್ಷಣಾ ವ್ಯವಸ್ಥೆಯನ್ನು ತ್ವರಿತಗೊಳಿಸಲು ಈ ಬ್ರಿಡ್ಜ್ ಸಹಾಯಕವಾಗಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.