ನವದೆಹಲಿ: ಗಂಗೆಯನ್ನು ಶುದ್ಧ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಅನುಷ್ಠಾನಕ್ಕೆ ತಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ಪಬ್ಲಿಕ್-ಪ್ರೈವೇಟ್ ಪಾಟ್ನರ್ಶಿಪ್(PPP) ಮಾಡೆಲ್ಗೆ ವಿಶ್ವಬ್ಯಾಂಕ್ ಸುಸ್ಥಿರ ಅಭಿವೃದ್ಧಿ ಅವಾರ್ಡ್ ಸಿಕ್ಕಿದೆ.
ಪಿಪಿಪಿ ಮಾಡೆಲ್ನ ತ್ಯಾಜ್ಯ ನೀರು ಶುದ್ಧೀಕರಣದಿಂದಾಗಿ ಗಂಗಾನದಿ ತಟದಲ್ಲಿ ವಾಸಿಸುತ್ತಿರುವ ಮಿಲಿಯನ್ಗಟ್ಟಲೆ ಜೀವಗಳ ಬದುಕು ಪರಿವರ್ತನೆಗೊಂಡಿದೆ. ವಿಶ್ವಬ್ಯಾಂಕ್, ಇಂಟರ್ನ್ಯಾಷನಲ್ ಫಿನಾನ್ಸ್ ಕಾರ್ಪೋರೇಶನ್, 2030 ವಾಟರ್ ರಿಸೋರ್ಸ್ ಗ್ರೂಪ್ಗಳ ಸಹಕಾರದೊಂದಿಗೆ ತ್ಯಾಜ್ಯನೀರು ನಿರ್ವಹಣಾ ಘಟಕಗಳಿಗೆ ಹಣಕಾಸು, ನಿರ್ವಹಣಾ, ಸುಸ್ಥಿರ ಕಾರ್ಯಾಚರಣೆಯ ಬೆಂಬಲ ಸಿಗುತ್ತಿದೆ.
ಗಂಗಾನದಿಗೆ ದಿನನಿತ್ಯ 8 ಸಾವಿರ ಲೀಟರ್ನಷ್ಟು ಕೊಳಚೆ ನೀರು ಸೇರುತ್ತಿದ್ದ ಪರಿಣಾಮ ಅದು ತೀವ್ರ ಸ್ವರೂಪದಲ್ಲಿ ಮಾಲಿನ್ಯಕ್ಕೆ ಒಳಗಾಗಿತ್ತು. ನಮಾಮಿ ಗಂಗಾ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಈ ಕೊಳಚೆ ನೀರುಗಳನ್ನು ಶುದ್ಧೀಕರಿಸಿ ನದಿಗೆ ಬಿಡುವ ಕಾರ್ಯವನ್ನು ಅನುಸರಿಸುತ್ತಿದೆ.
ಇದಕ್ಕೆ ಪಬ್ಲಿಕ್ ಪ್ರೈವೇಟ್ ಪಾಟ್ನರ್ಶಿಪ್ ಮಾದರಿಯನ್ನು ಅನುಷ್ಠಾನಕ್ಕೆ ತಂದಿದೆ. ಈ ಮಾದರಿಯ ಯಶಸ್ಸಿನಿಂದ ಸಂತುಷ್ಠಗೊಂಡಿರುವ ವಿಶ್ವಬ್ಯಾಂಕ್ ಸುಸ್ಥಿರ ಅಭಿವೃದ್ಧಿ ಅವಾರ್ಡ್ ಪ್ರದಾನಿಸಿದೆ.
source: newsbharati
Innovative Ganga PPP model wins @WorldBank Sustainable Development Award
The model supports financing and sustainable operations & maintenance of wastewater treatment plants in the Ganga basin https://t.co/2EbZYhaXIU pic.twitter.com/hBqh1cixyH
— UN-Water (@UN_Water) December 9, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.