ನವದೆಹಲಿ: ಸಂಸತ್ತಿನ ಮೇಲೆ ಉಗ್ರರ ದಾಳಿಯಾಗಿ ಇಂದಿಗೆ 17 ವರ್ಷಗಳಾಗಿವೆ. ಆ ಕರಾಳ ದಿನವನ್ನು ಭಾರತ ಇಂದು ಮೆಲುಕು ಹಾಕುತ್ತಿದ್ದು, ಘಟನೆಯಲ್ಲಿ ಹುತಾತ್ಮರಾದ ವೀರರಿಗೆ ಶ್ರದ್ಧಾಂಜಲಿಗಳನ್ನು ಸಮರ್ಪಣೆ ಮಾಡಲಾಗುತ್ತಿದೆ.
2001ರ ಡಿ.13ರಂದು ಭಯೋತ್ಪಾದಕರ ಗುಂಪು ಭಾರತದ ಪ್ರಜಾಪ್ರಭುತ್ವದ ಹೆಮ್ಮೆಯ ಪ್ರತೀಕ ಸಂಸತ್ತಿನ ಮೇಲೆ ದಾಳಿ ನಡೆಸಿತ್ತು. ಆದರೆ ಸಂಸತ್ತಿನ ಕಾವಲಿಗೆ ನಿಂತಿದ್ದ ವೀರ ಯೋಧರು, ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಯಾವೊಬ್ಬ ಉಗ್ರ ಕೂಡ ಸಂಸತ್ತಿನ ಒಳಗೆ ಪ್ರವೇಶಿಸದಂತೆ ತಡೆದರು.
ಘಟನೆಯಲ್ಲಿ ರಾಜ್ಯಸಭೆಯ ಸಂಸತ್ತು ಭದ್ರತಾ ಸೇವೆಯ ಇಬ್ಬರು ಸಿಬ್ಬಂದಿ, ಐದು ದೆಹಲಿ ಪೊಲೀಸರು, ಸಿಆರ್ಪಿಎಫ್ನ ಒರ್ವ ಮಹಿಳಾ ಕಾನ್ಸ್ಸ್ಟೇಬಲ್ ಹುತಾತ್ಮರಾಗಿದ್ದಾರೆ. ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಟ್ವಿಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್, ’ಹುತಾತ್ಮರನ್ನು ಈ ದಿನ ಭಾರತ ಸ್ಮರಿಸುತ್ತದೆ. ದ್ವೇಷ ಮತ್ತು ಭಯ ಉತ್ಪಾದಿಸುವ ಪಡೆಗಳು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿದ್ದವು, ಆದರೆ ಯಶಸ್ವಿಯಾಗಲ್ಲ. ಅಂತಹ ಪಡೆಗಳಿಗೆ ನಮ್ಮನ್ನು ಅಲುಗಾಡಿಸಲು ಬಿಡುವುದಿಲ್ಲ’ ಎಂದಿದ್ದಾರೆ.
‘2001ರ ಈ ದಿನ ನಮ್ಮ ಸಂಸತ್ತಿನ ಮೇಲೆ ನಡೆದ ದಾಳಿಯ ಸಂದರ್ಭ ಪ್ರಾಣತ್ಯಾಗ ಮಾಡಿದವರ ಶೌರ್ಯಕ್ಕೆ ನಮ್ಮ ವಿನಮ್ರ ವಂದನೆ. ಅವರ ಧೈರ್ಯ ಮತ್ತು ಹೀರೋಯಿಸಂ ಪ್ರತಿ ಭಾರತೀಯನಿಗೂ ಪ್ರೇರಣೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ.
ಉಪರಾಷ್ಟ್ರಪತಿಯವರೂ ಸಂಸತ್ ದಾಳಿಯನ್ನು ಸ್ಮರಿಸಿದ್ದು, ಹುತಾತ್ಮರಿಗೆ ಗೌರವಾರ್ಪಣೆ ಮಾಡಿದ್ದಾರೆ.
source: www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.