ದೇಶದ ಮೊದಲ ವೇದಿಕ ಸಂಶೋಧನಾ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ(ಸೆಪ್ಟೆಂಬರ್ 18)ರಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪ್ರಧಾನಿ ಮೋದಿಯವರು ತಮ್ಮ ಜನ್ಮದಿನದಂದು ಸ್ವಕ್ಷೇತ್ರಕ್ಕೆ ತೆರಳಿದ ಸಂದರ್ಭದಲ್ಲಿ ಈ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮರೆತುಹೋದ ಪ್ರಾಚೀನ ವೇದಿಕ ಗ್ರಂಥಗಳ ವಿಶ್ಲೇಷಣೆ ಮತ್ತು ಸಂಶೋಧನೆ ಈ ಕೇಂದ್ರ ಮಾಡಲಿದೆ ಎಂದು ಹೇಳಿದ್ದಾರೆ.
ಈ ವೇದಿಕ ಸಂಶೋಧನಾ ಕೇಂದ್ರವು, ‘ಪ್ರಾಚೀನ ಕಾಲದಲ್ಲಿ ಭಾರತೀಯರ ಜ್ಞಾನ ಮತ್ತು ಸಂಪ್ರದಾಯಗಳಿಂದ ಹುಟ್ಟಿಕೊಂಡ ಅನೇಕ ಆಚರಣೆಗಳು, ಸಂಗೀತ, ಸಾಹಿತ್ಯ, ವಾಸ್ತುಶಿಲ್ಪ, ಜ್ಯೋತಿಷ್ಯಶಾಸ್ತ್ರ, ಖಗೋಳ ವಿಜ್ಞಾನ, ಕಾಸ್ಮಾಲಜಿ, ಔಷಧಶಾಸ್ತ್ರ, ವಿಜ್ಞಾನ, ಶಸ್ತ್ರಚಿಕಿತ್ಸೆ, ಮಿಲಿಟರಿ ತಂತ್ರ, ಯೋಗ, ಗಣಿತಶಾಸ್ತ್ರ, ಲೋಹಶಾಸ್ತ್ರ ಹೀಗೆ ಇತ್ಯಾದಿ ಅಂಶಗಳ ಮೇಲೆ ಗಮನ ಹರಿಸಲಿದೆ’ ಎಂದು ವೇದಿಕ ವಿಭಾಗದ ಮುಖ್ಯಸ್ಥ ಉಪೇಂದ್ರ ಕುಮಾರ ತ್ರಿಪಾಠಿ ಹೇಳಿದ್ದಾರೆ.
ಭಾರತದ ಪ್ರಾಚೀನ ಕಾಲಜ್ಞಾನಿಗಳಾದ ಭರತಮುನಿ, ಆರ್ಯಭಟ, ಭಾಸ್ಕರ I ಮತ್ತು II, ವರಾಹಮಿಹಿರ, ಸುಶ್ರುತ ಮತ್ತು ಚರಕ ಮುಂತಾದವರು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಆದರೆ ಕಳೆದ 7-8 ಶತಮಾನಗಳಲ್ಲಿ ವೇದಿಕ ವಿಜ್ಞಾನವು ಮರೆತು ಹೋಗಿದೆ. ಈ ಶತಮಾನಗಳ ಅಂತರವನ್ನು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳೊಂದಿಗೆ ಸಂಪರ್ಕಿಸುವ ಮೂಲ ಉದ್ದೇಶ ಈ ಕೇಂದ್ರ ಹೊಂದಿದೆ’ ಎಂದು ತ್ರಿಪಾಠಿಯವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.