ಮಂಗಳೂರು : ಸದ್ಗುರು ಸುಧೀಂದ್ರ ತೀರ್ಥರು ಗುರು ಸುಕೃತೀಂದ್ರ ತೀರ್ಥರ ದೀಕ್ಷಾ ಸ್ತುತಿಯಲ್ಲಿ ದೀಕ್ಷಾ ಸ್ವೀಕೃತ ಕಾವೇರಿ ತಟದಲ್ಲಿ. ಮಠ ನಿರ್ಮಾಣದ ಸಂಕಲ್ಪದಿಂದ ಕಾವೇರಿ ಉಗಮ ಸ್ಥಾನದಲ್ಲಿ ಒಂದು ಸುಂದರ ಮಠದ ನಿರ್ಮಾಣ. ಅದೇ ಕ್ಷೇತ್ರದಲ್ಲಿ ಸದ್ಗುರು ಸುಧೀಂದ್ರರ ಇಚ್ಛಾ ಸ್ವರೂಪದ ಸಾಕ್ಷಾತ್ಕಾರ ಶ್ರೀಮದ್ ಸಂಯಮೀಂದ್ರ ತೀರ್ಥರಿಂದ ನಡೆಯಲಿದೆ. 6-11-2016 ರಂದು ಶ್ರೀಮಠ ಭುವನೇಂದ್ರ ಆಯುರ್ವೇದ ವೃಕ್ಷವಾಟಿಕಾ – ಉದ್ಘಾಟನೆ, ಶ್ರೀಮದ್ ಭುವನೇಂದ್ರ ತೀರ್ಥ ಶ್ರೀಗಳ ಸ್ಮೃತಿಯಲ್ಲಿ ವಿಗ್ರಹ ಸ್ಥಾಪನೆ ಕಾರ್ಯಕ್ರಮಗಳು ಭಾಗಮಂಡಲದಲ್ಲಿ ನಡೆಯಲಿವೆ.
ಅಗಸ್ತ್ಯಮಹಾಮುನಿಗಳ ಕಾರ್ಯಕ್ಷೇತ್ರ ಭಗಂಡ ಋಷಿಗಳ ತಪೋಭೂಮಿ ಭಾಗಮಂಡಲ ಉತ್ತರ ಭಾರತ- ದಕ್ಷಿಣ ಭಾರತದ ಸಂಪರ್ಕವನ್ನು ವ್ಯವಸ್ಥಿತಗೊಳಿಸಿದ ಅಗಸ್ತ್ಯರು, ಸಿದ್ಧವೈದ್ಯ ಪದ್ಧತಿ ಎಂಬ ಹೆಸರಲ್ಲಿ ಆಯುರ್ವೇದ ಸಂವರ್ಧಕರು. ದಕ್ಷಿಣ ಭಾರತದ ಮಹಾನದಿಯ ತ್ರಿವೇಣಿಸಂಗಮ, ತುಲಾ ಸಂಕ್ರಮಣದಂದು ಗಂಗಾ ಉದ್ಭವವಾಗುವ ದಿವ್ಯ ಕ್ಷೇತ್ರ ತಲ ಕಾವೇರಿ.
ಉತ್ತರಭಾರತದಲ್ಲಿ ಪುಣ್ಯನಗರಿ ಕಾಶೀಯಲ್ಲಿ ನಮ್ಮ ಮೂಲಮಠ ಕಾಶಿಯಲ್ಲಿನ ಮಠಕ್ಕೆ ಹೋಗಿಬರುವ ಮೂಲಕ ನಮ್ಮ ಧರ್ಮಪೀಠವು. ಉತ್ತರ- ದಕ್ಷಿಣ ಭಾರತದ ಸಂಪರ್ಕಕ್ಕೆ ಕಾರಣವಾಯಿತು. ಶ್ರೀಕಾಶೀಮಠ ಸಂಸ್ಥಾನದ ಪೀಠವಿರಾಜಿತ ಎಲ್ಲಾ ಯತಿಗಳು ಆಯುರ್ವೇದವನ್ನು ಚೆನ್ನಾಗಿ ತಿಳಿದು ಜನರಿಗೆ ಚಿಕಿತ್ಸಾದಿ ನೀಡಿ ಹರಸಿದರು.
ಭುವನವಂದ್ಯ ಭುವನ ವಿಖ್ಯಾತ ಭುವನ ಜೀವನರಾದ ಶೀಮದ್ ಭುವನೇಂದ್ರ ತೀರ್ಥಯತಿ ವರೇಣ್ಯರು ಆಯುರ್ವೇದದ ಸಂರಕ್ಷಕ-ಪ್ರವರ್ಧಕ-ಪ್ರವರ್ತಕರೂ ಆದ ಯತಿ ಭುವನೇಂದ್ರ ತೀರ್ಥರು ಸಮಾಜಕ್ಕೆ ತಮ್ಮ ಅಭಿಪ್ರಾಯ ತಿಳಿಸಿದ್ದರು. ಒಂದು ಆಯುರ್ವೇದ ವೃಕ್ಷ ವಾಟಿಕೆಯ ನಿರ್ಮಾಣವಾಗಬೇಕು, ಅದು ಮಲೆನಾಡಿನಲ್ಲಿ ಆದರೆ ಉತ್ತಮ ಎಂದು.
ಹಲವಾರು ಪ್ರಯತ್ನ ನಡೆದರೂ ನಂತರ 125ನೇ ಪುಣ್ಯತಿಥಿ ಪರ್ವಾಚರಣೆಯ ಚಿಂತನೆ ಕಾಲದಲ್ಲಿ ಪುನಃ ಆಯುರ್ವೇದ ವೃಕ್ಷವಾಟಿಕೆಯ ಸಕ್ರಿಯತೆಗಾಗಿ ಚಿಂತನೆ ನಡೆಸಿದ್ದು ಶ್ರೀಗಳ ಉಪಸ್ಥಿತಿಯಲ್ಲಿ.
ಕೋಟೇಶ್ವರದಲ್ಲಿ ಆಯುರ್ವೇದ ಚಿಕಿತ್ಸಾಲಯ, ಪ್ರತಿ ತಿಂಗಳು ಆಯುರ್ವೇದ ಶಿಬಿರಗಳು ಹಲವು ಊರಲ್ಲಿ ಕ್ರಿಯಾಶೀಲತೆ ಕಂಡದ್ದು ಶ್ರೀ ಸಂಯಮೀಂದ್ರ ತೀರ್ಥರ ಗುರುವಾಕ್ಯ ಪಾಲನೆಯ ದ್ಯೋತಕ. ಆಯುರ್ವೇದಿಕ ವೃಕ್ಷವಾಟಿಕೆಯ ಸಕ್ರಿಯತೆ ಬಗ್ಗೆ ಮುನ್ನಡೆದ ಶ್ರೀಗಳಿಗೆ ಗುರು ಅನುಗ್ರಹದಿಂದ ಶ್ರೀಮದ್ ಭುವನೇಂದ್ರ ತೀರ್ಥರು ಹರಸಿದ್ದು ಕಾಞಂಗಾಡು ಚಾತುರ್ಮಾಸ ಪರ್ವಕಾಲದಲ್ಲಿ.
ಗುರುಗಳ ಇಚ್ಛಾಪೂರ್ತಿಗೊಳಿಸುವ ಮುನ್ನಡೆ ಶ್ರೀ ಸಂಯಮೀಂದ್ರ ತೀರ್ಥರದ್ದು. ಸಮಾಜದ ಸರ್ವರಿಗೂ ಈ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಲು ಅವಕಾಶವಿದ್ದು ಆಯುರ್ವೇದ ಅಧ್ಯಯನ ಮಾಡಿದವರು, ಆಯುರ್ವೇದದ ಅಭಿಮಾನಿಗಳು, ಆಸಕ್ತರು ಮುನ್ನಡೆಯಬೇಕು. ಇದೊಂದು ಭುವನ ವಿಖ್ಯಾತ ವೃಕ್ಷವಾಟಿಕೆಯಾಗಲು ಹಲವರು ಪ್ರಮುಖರು ಕಾರ್ಯಪ್ರವೃತ್ತರಾಗಿದ್ದಾರೆ. ಶ್ರೀಗುರು ಸೇವಾರೂಪದಲ್ಲಿ ಈ ವನ ದರ್ಶನೀಯ – ಸೇವನೀಯ – ರಕ್ಷಸೀಯವಾಗಬೇಕು. ಶ್ರೀಕಾಶೀಮಠಾಧೀಶ ಸಂಯಮೀಂದ್ರ ತೀರ್ಥರಿಂದ ಇದು ಗುರುಚರಣಗಳಲ್ಲಿ ಶಿಷ್ಯರು ಅರ್ಪಿಸಿದ ಅಪೂರ್ವ ಕಾಣಿಕೆ- ಅಮರ ಪುಷ್ಪಾಂಜಲಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.