ಗಲ್ಫ್ : ಕೊಲ್ಲಂನಲ್ಲಿ ನಡೆದಿರುವ ಪಟಾಕಿ ದುರಂತದ ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂಗಳನ್ನು ಡಾ.ಬಿ.ಆರ್.ಶೆಟ್ಟಿಯವರು ದೇಣಿಗೆಯಾಗಿ ನೀಡದ್ದಾರೆ.
ಕೊಲ್ಲಂನ ಪಾವುರಿನಲ್ಲಿರುವ ಪುತ್ತಿಂಗಲ್ ದೇವಿಯ ದೇವಿ ದೇವಸ್ಥಾನದಲ್ಲಿ ಪಟಾಕಿ ದುರಂತಕ್ಕೆ 110ಜನ ಬಲಿಯಾಗಿದ್ದು 400 ಜನ ಗಾಯಗೊಂಡಿದ್ದರು. ಮೀನ ಭರಣಿಯ ಕಾರ್ಯಕ್ರಮದಲ್ಲಿ ಎ.10 ರಂದು ನಡೆದ ಮೀನ ಭರಣಿ ಕಾರ್ಯಕ್ರಮದಲ್ಲಿ ಈ ಅನಾಹುತ ಸಂಭವಿಸಿದ್ದು, ಈ ಕಾರ್ಯಕ್ರಮದಲ್ಲಿ ಜನರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕರಾವಳಿ ಭಾಗದವರಾದ ಡಾ.ಬಿ.ಆರ್.ಶೆಟ್ಟಿಯವರು ಗಲ್ಫ್ ಭಾಗದ ಉದ್ಯಮಿಯಾಗಿದ್ದು, ಅವರು ತಮ್ಮ ಕಡೆಯಿಂದ ಚಿಕಿತ್ಸೆ, ಔಷಧ ಮತ್ತು ವೈದಕೀಯ ನೆರವನ್ನು ಕೂಡಾ ನೀಡಿದ್ದಾರೆ. ಡಾ.ಬಿ.ಆರ್.ಶೆಟ್ಟಿಯವರು ಸಹಾಯಕ್ಕಾಗಿ ಕೇರಳ ಸಿಎಂ ಉಮನ್ ಚಾಂಡಿ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.