ನವದೆಹಲಿ: ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಪ್ರೇರಣೆ ನೀಡುತ್ತಿರುವ ಸಾಮಾನ್ಯ ಶ್ರಮಿಕ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಮನ್ ಕೀ ಬಾತ್ ‘ ಕಾರ್ಯಕ್ರಮದಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಮಾತ್ರವಲ್ಲದೇ ಅಂತಹ ಕೆಲವರ ಹೆಸರನ್ನೂ ಉಲ್ಲೇಖ ಮಾಡಿದ್ದಾರೆ.
ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ಉತ್ತರಪ್ರದೇಶ ಖಾನ್ಪುರ ಜಿಲ್ಲೆಯ ವೈದ್ಯ ಅಜಿತ್ ಮೋಹನ್ ಚೌಧುರಿ, 9 ಶಾಲೆಗಳನ್ನು ಸ್ಥಾಪನೆ ಮಾಡಿರುವ ಅಸ್ಸಾಂ ರಿಕ್ಷಾ ಚಾಲಕ ಅಹ್ಮದ್ ಅಲಿ ಅವರನ್ನು ಮೋದಿ ಕೊಂಡಾಡಿದ್ದಾರೆ.
ಚೌಧುರಿಯವರು ಬಡವರ ಮನೆಗೆ, ಫುಟ್ಪಾತ್ಗಳಿಗೆ ತೆರಳಿ ಅಲ್ಲಿ ವಾಸಿಸುವ ಜನರಿಗೆ ಉಚಿತವಾಗಿ ಪರೀಕ್ಷೆ ಮಾಡಿ ಔಷಧಿಗಳನ್ನು ನೀಡುತ್ತಾರೆ. ಅವರ ಈ ಕಾರ್ಯ ದೇಶದಲ್ಲಿನ ಭಾತೃತ್ವದ ಭಾವನೆಯ ಸಂಕೇತ ಎಂದು ಮೋದಿ ಬಣ್ಣಿಸಿದ್ದಾರೆ.
ರಿಕ್ಷಾ ಚಾಲಕನೊಬ್ಬ 9 ಶಾಲೆಗಳನ್ನು ನಿರ್ಮಾಣ ಮಾಡಿರುವ ಕಥನ ನನಗೆ ಇಚ್ಛಾಶಕ್ತಿಯ ದರ್ಶನ ಮಾಡಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.